ಮನೆ ರಾಜ್ಯ ಸ್ನೇಹಿತರ ಜೊತೆ ಅರ್ಕಾವತಿ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು

ಸ್ನೇಹಿತರ ಜೊತೆ ಅರ್ಕಾವತಿ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು

0

ರಾಮನಗರ: ಸ್ನೇಹಿತರ ಜೊತೆ ಅರ್ಕಾವತಿ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ರಾಮನಗರ ತಾಲ್ಲೂಕಿನ ದ್ಯಾವರಸನೇಗೌಡನದೊಡ್ಡಿ ಬಳಿ ನಡೆದಿದೆ.

ಕಿಶೋರ್ (14) ಮೃತ ಯುವಕ.

ರಾಮನಗರ ಟೌನ್ ನ ವಿನಾಯಕನಗರ ನಿವಾಸಿ ಮೃತ ಕಿಶೋರ್ 8ನೇ ತರಗತಿ ಓದುತ್ತಿದ್ದ.

ನಿನ್ನೆ ಮಧ್ಯಾಹ್ನ ಸ್ನೇಹಿತರ ಜೊತೆ ಈಜಲು ಹೋಗಿದ್ದ. ಕಿಶೋರ್ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಭಯದಲ್ಲಿ ಜಾಗ ಖಾಲಿ ಮಾಡಿದ್ದಾರೆ.

ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ರಾಮನಗರ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ, ಪೊಲೀಸರು ಕಿಶೋರ್ ಸ್ನೇಹಿತರ ಬಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸ್ನೇಹಿತರು ಕಿಶೋರ್ ನೀರಿನಲ್ಲಿ ಮುಳುಗಿ ಹೋಗಿರುವ ಕುರಿತು ಸತ್ಯ ಬಾಯಿಬಿಟ್ಟಿದ್ದಾರೆ.

ಈ ಸಂಬಂಧ ಅರ್ಕಾವತಿ ನದಿಯಲ್ಲಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದು, ಮೃತ ದೇಹ ಪತ್ತೆಯಾಗಿದೆ.

ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.