ಮನೆ ರಾಜ್ಯ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಆರೋಪಿ ಬಂಧನ

ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಆರೋಪಿ ಬಂಧನ

0

ಹುಬ್ಬಳ್ಳಿ: ಹುಬ್ಬಳ್ಳಿಯ ಮಹಾಲಕ್ಷ್ಮೀ ಬಡಾವಣೆಯಲ್ಲಿ ಕರೆಂಟ್​ ಬಿಲ್ ಕೊಡಲು ಹೋದ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ಮಲ್ಲಯ್ಯ ಗಣಾಚಾರಿ ಹಲ್ಲೆಗೊಳಗಾದ ಹೆಸ್ಕಾಂ ಮೀಟರ್ ರೀಡರ್. ಅಬ್ದುಲ್ ಹಲ್ಲೆ ಮಾಡಿದ ಗ್ರಾಹಕ.

ಅಬ್ದುಲ್ ಕಳೆದ 2-3 ತಿಂಗಳ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಆಗಸ್ಟ್ ತಿಂಗಳ ಬಿಲ್ 5 ಸಾವಿರಕ್ಕಿಂತ ಜಾಸ್ತಿ ಬಂದಿದೆ. ನಿಗದಿತ 200 ಯೂನಿಟ್ ​ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಗೃಹಜ್ಯೋತಿ ಯೋಜನೆ ಸಹ ಕ್ಯಾನ್ಸಲ್ ಆಗಿದೆ.

ಹೀಗಾಗಿ ಮೀಟರ್ ರೀಡರ್ ಮಲ್ಲಯ್ಯ ಗಾಣಾಚಾರಿ ಎಂದಿನಂತೆ ವಿದ್ಯುತ್​ ಬಿಲ್ ನೀಡಲು ಹೋಗಿದ್ದಾರೆ. ಈ ವೇಳೆ ವಿದ್ಯುತ್​​ ಬಿಲ್​ ಜಾಸ್ತಿ ಬಂದಿದೆ ಎಂದು ಗ್ರಾಹಕ ​ಅಬ್ದುಲ್ ಇಟ್ಟಿಗೆಯಿಂದ ಮಲ್ಲಯ್ಯ ಗಾಣಾಚಾರಿ ಅವರ ತಲೆಗೆ ಹೊಡೆದು, ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವ ಆರೋಪಿ ಅಬ್ದುಲ್ ​ನನ್ನು ಪೊಲೀಸರು ಬಂಧಿಸಿದ್ದಾರೆ.