ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೊಸದಾಗಿ ಪರಿಚಯವಾಗಿದ್ದ ಹುಡುಗಿಯನ್ನು, ನಂದಿಬೆಟ್ಟ ತೋರಿಸಲು ಕಾರಿನಲ್ಲಿ ಕರೆದುಕೊಂಡು ಹೊರಟಿದ್ದ ಮೋಹನ ಮಧ್ಯದಲ್ಲಿಯೇ ಕಾರು ನಿಲ್ಲಿಸಿದ. 

ಹುಡುಗಿ : (ಗಾಬರಿಯಿಂದ) ಯಾಕೆ, ಕಾರು ಕೆಡ್ತಾ ?

ಮೋಹನ : ಇಲ್ಲ ಎಂಜಿನ್ ಬಿಸಿಯಾಗಿದೆ.

ಹುಡುಗಿ : (ಹುಸಿಮುನಿಸು ತೋರುತ್ತಾ) ಈ ಹುಡುಗರೇ ಹೀಗೆ, ಕಾಡಲ್ಲಿ ಕಾರು ನಿಂತದ್ದಕ್ಕೆ ಕಾರಣ ಕಾರು ಅಂತಾನೆ ಹೇಳ್ತಾರೆ..

***

ತರುಣ : ಸದ್ಯ ನಮ್ಮ ಮದುವೆಯಾಯ್ತಲ್ಲ. ಇನ್ಮೇಲೆ ದಾರಿ ತಪ್ಪಿದ ಶ್ರೀಮಂತನ ಮಗನಂತೆ ನಾನು ಆಡುವುದಿಲ್ಲ. ಆದರೆ ಒಂದು ಮಾತು.

ನವವಧು : ಏನು?

ತರುಣ : ನೀನು ಆಗಾಗ ಖರ್ಚಿಗೆ ನಿಮ್ಮಪ್ಪನನ್ನು ಹಣ ಕೇಳುತ್ತಿದ್ದರೆ ಮಾತ್ರ.

***

ಗೌರಿ : ರೀ.. ಶಾಂತಿ ನನ್ನ ಬಾಯ್ ಫ್ರೆಂಡ್ ದಿನ ರಾತ್ರಿ ಬಂದು ಕಾಟ ಕೊಡ್ತಾ ಸಿನಿಮಾಕ್ಕೆ ಹೋಗೋಣ ಬಾ, ಹೋಟೆಲ್ ಗೆ ಹೋಗೋಣ ಬಾ ಅಂತಾನೆ, ಏನ್ರೀ ಮಾಡ್ಲಿ?

ಶಾಂತಿ : ಅಯ್ಯೋ ಅದಕ್ಕೆನಂತೆ ಹೋಗಿ ಬನ್ರೀ, ಹೇಗೊ ನಿಮ್ಮ ಯಜಮಾನರು ರಾತ್ರಿ ಮಲಗಿದ್ದರೆ, ಬೆಳಗ್ಗೆ ತಾನೇ ಏಳೋದು ?. 

***

ಜಗ್ಗು : ದೇವರೇ ಒಂದು ಚೀಲದ ತುಂಬಾ ದುಡ್ಡು ಹಾಗೂ ಒಂದು ವಾಹನ ಯಾವಾಗಲೂ ನನ್ನ ಜೊತೆಯಲ್ಲಿ ಇರುವಂತೆ ಮಾಡಪ್ಪ.

ದೇವರು : ತಥಾಸ್ತು ನೀನು ಬಸ್ ಕಂಡಕ್ಟರ್ ಆಗು.