ಮನೆ ರಾಷ್ಟ್ರೀಯ ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ, ಲಭಿಸಬೇಕಿರುವ ಪಾಲು ಮಾತ್ರ ಬೇಕು: ಕೆ.ಅಣ್ಣಾಮಲೈ

ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ, ಲಭಿಸಬೇಕಿರುವ ಪಾಲು ಮಾತ್ರ ಬೇಕು: ಕೆ.ಅಣ್ಣಾಮಲೈ

0

ದಿಂಡಿಗಲ್ (ತಮಿಳುನಾಡು): ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ. ಆದರೆ, ಲಭಿಸಬೇಕಿರುವ ಕಾವೇರಿ ನೀರಿನ ಪಾಲು ಮಾತ್ರ ಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಕರ್ನಾಟಕದೊಂದಿಗೆ ನಡೆಯುತ್ತಿರುವ ಕಾವೇರಿ ಜಲ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಕಾನೂನು ಪಾಲಿಸಬೇಕು. 2018ರ ನಂತರ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಅದು ನಿರ್ಧಾರ ಪ್ರಕಟಿಸಿದೆ. ಸಮಸ್ಯೆಗಳಿದ್ದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿ ಮೇಲ್ಮನವಿ ಸಲ್ಲಿಸಬಹುದು. ಆದ್ರೆ, ತಮಿಳುನಾಡಿನ ವಾದವನ್ನು ಕೋರ್ಟ್ ಸಂಪೂರ್ಣವಾಗಿ ಪರಿಶೀಲಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ತಿಳಿಸಿದರು.

ಬುಧವಾರದಿಂದ 15 ದಿನಗಳ ಕಾಲ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಮಂಗಳವಾರ ನಿರ್ದೇಶನ ನೀಡಿದೆ. ಕರ್ನಾಟಕದಲ್ಲಿ ನೀರಿನ ಅಭಾವ ತಲೆದೋರಿದ್ದು, ರೈತರು ಕಂಗಾಲಾಗಿದ್ದಾರೆ. ಆದರೆ, ತಮಿಳುನಾಡಿನ ಡಿಎಂಕೆ ಸರಕಾರ ಮುಂದಿಟ್ಟಿದ್ದ 12,500 ಕ್ಯೂಸೆಕ್‌ ಬೇಡಿಕೆಗೆ ವಿರುದ್ಧವಾಗಿ ಕಾವೇರಿಯಿಂದ 5 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಸಮಿತಿ ಸೂಚಿಸಿದೆ.