ಮನೆ ರಾಜ್ಯ ಪಾಲಿಕೆ, ಸವಾಲ್ ಟಿವಿ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ

ಪಾಲಿಕೆ, ಸವಾಲ್ ಟಿವಿ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ

0

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ಸವಾಲ್ ಟಿವಿ ಸಹಯೋಗದೊಂದಿಗೆ ಇದೇ ಭಾನುವಾರ ಪಾಲಿಕೆಯ ವಾರ್ಡ್ ನಂ. 20ರಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಾರ್ಡ್ ನಂ.20 ವಿಜಯನಗರ ಪೊಲೀಸ್ ಠಾಣೆ ಬಳಿ ಇರುವ ಆಂಜನೇಯ ದೇವಸ್ಥಾನದ ಸುತ್ತಮುತ್ತಲು  ಹಾಗೂ ಅಕ್ಕಪಕ್ಕದ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ಕಾರ್ಯಕ್ರಮದಲ್ಲಿ ವಾರ್ಡ್ ನಂ. 20 ಕಾರ್ಪೊರೇಟರ್ ಎಮ್.ಯು ಸುಬ್ಬಯ್ಯ, ವಾರ್ಡ್ ಅಧ್ಯಕ್ಷ ವಸಂತ್ ಕುಮಾರ್, ಆರ್ ಎಸ್ ಎಸ್ ಕಾರ್ಯಕರ್ತರಾದ ಪ್ರಶಾಂತ್, ಅವಿನಾಶ್, ರಾಮಕೃಷ್ಣ, ಸತೀಶ್, ಯೋಗೇಶ್, ಶ್ರೀಕಾಂತ್, ಕಿಶೋರ್, ಸಂದೀಪ್, ತಮ್ಮಯ್ಯ, ಮುತ್ತಪ್ಪ, ಅಭಿಷೇಕ್, ಮಂಜುಳಾ, ಪುಷ್ಪ, ವೀಣಾ, ಮಹಾನಗರ ಪಾಲಿಕೆಯ ವಾರ್ಡ್ 20ರ ಸಹಾಯಕ ಆಯುಕ್ತರು, ಸಿಬ್ಬಂದಿ ವರ್ಗದವರು ಮತ್ತು ಸವಾಲ್ ಪತ್ರಿಕೆ ಮತ್ತು ಟಿವಿಯ ಸಂಪಾದಕರು ಹಾಗೂ ಸಂಸ್ಥಾಪಕರು ಆದ ಶ್ರೀಯುತ ಪ್ರದೀಪ್ ಕುಮಾರ್ ಅವರು, ಸಿಬ್ಬಂದಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.