ರಾಜ್ಯ ಸರ್ಕಾರದ ಜನಪ್ರಿಯ ಹಾಗೂ ಜನಪರ ಪಂಚ ಗ್ಯಾರಂಟಿಗಳ ವಾರ್ತಾ ಇಲಾಖೆ ಮಳಿಗೆ ಜನರನ್ನು ತನ್ನತ್ತ ಸೆಳೆಯುವುದರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ಮೆಚ್ಚುಗೆಗೂ ಪಾತ್ರವಾಯಿತು.
ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭವ್ಯವಾಗಿ ಮೂಡಿಬಂದಿರುವ ವಾರ್ತಾ ಇಲಾಖೆಯಿಂದ ಹಾಕಲಾಗಿರುವ ಮಳಿಗೆಯಲ್ಲಿ ನುಡಿದಂತೆ ನಡೆದಿದ್ದೇವೆ ಎನ್ನುವುದರೊಂದಿಗೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಭರಪೂರ ಮಾಹಿತಿ ಆಸಕ್ತರಿಗೆ ಸರ್ಕಾರ ನಮಗೆ ಇಷ್ಟೆಲ್ಲಾ ಕೊಟ್ಟಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುವಂತೆ ಮಾಡುವುದರೊಂದಿಗೆ ಮಳಿಗೆ ಉಧ್ಘಾಟಿಸಿದ ಸಿ.ಎಂ.ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ವಾರ್ತಾ ಇಲಾಖೆಯ ಪ್ರಯತ್ನವನ್ನು ಶ್ಲಾಘಿಸಿದರು
ಪ್ರಮುಖ ಐದು ಗ್ಯಾರಂಟಿಗಳಾದ ಅನ್ನಭಾಗ್ಯ,ಗೃಹಲಕ್ಷ್ಮಿ,ಗೃಹಜ್ಯೋತಿ,ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಅನುಕೂಲ ಪಡೆದ ಫಲಾನುಭವಿಗಳ ಅಂಕಿ ಸಂಖ್ಯೆ ನೀಡುವುದರೊಂದಿಗೆ,ಯೋಜನೆಗಳಲ್ಲಿ ನೊಂದಾಯಿಸಿಕೊಳ್ಳದಿರುವವರು ಹೇಗೆ ನೋಂದಾಯಿಸಿಕೊಳ್ಳಬೇಕೆಂಬುದನ್ನು ವಾರ್ತಾ ಇಲಾಖೆಯ ಸ್ವಯಂ ಸೇವಕರು ಮಾಹಿತಿ ನೀಡುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳು ಮಹಿಳೆಯರ,ಯುವಕ ಯುವತಿಯರ,ಹಿಂದುಳಿದ ಅಲ್ಪಸಂಖ್ಯಾತರ, ಗೃಹಿಣಿಯರ ಮನೋಸ್ಥೈರ್ಯವನ್ನು ಹೆಚ್ಚಿಸಿವೆ.
ಮಳಿಗೆ ನೋಡಲು ಬರುತ್ತಿರುವ ಬಹಳಷ್ಟು ಮಹಿಳೆಯರು ಸಿದ್ದರಾಮಯ್ಯನವರ ಕಟೌಟ್ ಗಳಿಗೆ ಕೈ ಮುಗಿದದ್ದೂ ಇದೆ
ಬಹಳ ಅಂದ ಹಾಗೂ ಆಕರ್ಷಕವಾಗಿ ಮೂಡಿಬಂದಿರುವ ಜೀವಂತಿಕೆಗೆ ಹತ್ತಿರವಾಗಿರುವ ಬೊಂಬೆಗಳ ಕಲಾಕೃತಿಗಳು ಯೋಜನೆಯ ಸಾರಾಂಶವನ್ನ ಮನದಟ್ಟು ಮಾಡಲು ಮತ್ತಷ್ಟು ಸಾಥ್ ನೀಡುತ್ತಿವೆ.
ಕನ್ನಡದ ಮೊದಲ ಗ್ರಂಥ, ಮೊದಲ ಕಾವ್ಯ,ಕೃತಿ,ಮೊದಲ ಚಲನಚಿತ್ರ, ಕನ್ನಡದ ಕವಿಗಳು,ಸಾಹಿತಿಗಳು,ಶರಣರು,ನಾಡಿಗೆ ನಾಲ್ವಡಿಯವರ ಕೊಡುಗೆಗಳು,ಭಾರತ ರತ್ನ ಪಡೆದ ಕನ್ನಡಿಗರು ಸೇರಿದಂತೆ ವಿವಿಧ ಮಾಹಿತಿಗಳು ಮೇಳೈಸಿವೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ್ದ ಯೋಜನೆಗಳಾದ ಜನತಾದರ್ಶನ,ಇಂದಿರಾ ಕ್ಯಾಂಟೀನ್, ಬ್ರಾಂಡ್ ಬೆಂಗಳೂರು,ಪಿಟಿಸಿಎಲ್ ಕಾಯ್ದೆ ತಿದ್ದುಪಡಿ,ಕ್ಷೀರಭಾಗ್ಯ ಯೋಜನೆಗಳ ಮಾಹಿತಿ ಮಹತ್ವದ್ದಾಗಿದೆ.
ಸರ್ಕಾರದ ಎಲ್ಲಾ ಯೋಜನೆಗಳು ಆಕರ್ಷಕ ಹಾಗೂ ಮಾಹಿತಿಪೂರ್ಣವಾಗಿದ್ದು ಈಗಾಗಲೇ ರಾಜ್ಯದ ಶೇ.92 ರಷ್ಟು ಜನಕ್ಕೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ತಲುಪುತ್ತಿವೆ.
ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ವಿಶ್ವದಾಖಲೆ ಮಾಡಿದ 2,31,66,401 ಜನರಿಗೆ ಧನ್ಯವಾದ ಹೇಳಲಾಗಿದೆ.
ಸ್ತ್ರೀ ಸ್ವಾತಂತ್ರ್ಯದತ್ತ ದಿಟ್ಟಹೆಜ್ಜೆ ,ನಾಲ್ವಡಿಯವರ ಸಾಮಾಜಿಕ ಕಾನೂನುಗಳು, ಸಿ.ಎಂ.ಸಿದ್ದರಾಮಯ್ಯನವರ ಆಯವ್ಯಯ ಮಂಡನೆಯ ಚರಿತ್ರಾರ್ಹ ದಾಖಲೆ,ಲೇಸ್ಲಿ ಮಿಲ್ಲರ್ ಸಮಿತಿ,ಪಾಲ್ಕೆ ಪುರಸ್ಕೃತರ ವಿವರಗಳು ಅಂದವಾಗಿ ಮೂಡಿಬಂದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.