ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಡಾಕ್ಟರ್ : ಮತ್ತೇನು ಬಂದ್ರಿ ?

ರಾಜು : ಅದೇ ನನಗೆ ನೆನಪಿನ ಶಕ್ತಿ ಕಮ್ಮಿಯಾಗಿದೆ ಡಾಕ್ಟರೇ

ಡಾಕ್ಟರ್ : ಅದಕ್ಕೆ ಅವತ್ತೆ ಮಾತ್ರೆಗಳ ಕೊಟ್ಟಿದ್ನಲ್ಲ.

ರಾಜು : ನೀವು ಮಾತ್ರೆ ಕೊಟ್ಟಿದ್ದು ಈಗ ನೆನಪಿಗೆ ಬಂತು, ಮತ್ತೊಂದು ತೊಂದ್ರೆ ಡಾಕ್ಟ್ರೇ

ಡಾಕ್ಟರ್ : ಮತ್ತೊಂದು ತೊಂದರೆ ?

ರಾಜು : ಮಾತ್ರೆ ನುಂಗೋದೇ ಮರೆತು ಹೋಗುತ್ತೆ.

***

ರಾಜು : ನಮ್ಮಪ್ಪ ಸಿಪಾಯಿಯಾಗಿದ್ದಾಗ ಒಂದೇ ಬಾರಿಗೆ ಪಾಕಿಸ್ತಾನಿಗಳ ಕಾಲುಗಳನ್ನ ಕಡಿದು ಹಾಕಿದ್ರು ಗೊತ್ತಾ ?

ಕಿಟ್ಟು : ಹೌದಾ! ತಲೆ ಏಕೆ ಕಡಿಲಿಲ್ಲ ?

ರಾಜು : ಅವರ ತಲೆಗಳನ್ನು ಮುಂಚೆ ಯಾರು ಕುಡಿದು ಹಾಕಿದರು.

***

ಟೀಚರ್ : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಬಲ್ಲದೆ

ರಾಜು : ಬಗ್ಗುತ್ತೆ ಟೀಚರ್

ಟೀಚರ್ : ಅದು ಹೇಗೆ ಹೇಳ್ತೀಯಾ ?

ರಾಜು : ನಮ್ಮಜ್ಜ ಹುಡುಗನಾಗಿದ್ದಾಗ ನೇರವಾಗಿ ಇದ್ದರು ಈಗ ಬಗ್ಗಿ ಬಿಟ್ಟಿದ್ದಾರೆ.

***

ಕಿಟ್ಟು : ರಾಜು ಈ ಕಣ್ಣು ರೆಪ್ಪೆ ನೋಡು, ಎಷ್ಟು ಹೊಂದಿಕೊಂಡಿವೆ. ಅಂದ್ರೆ, ಒಟ್ಟಿಗೆ ಮುಚ್ಚುತ್ತವೆ, ಒಟ್ಟಿಗೆ ತೆರೆಯುತ್ತವೆ, ಒಟ್ಟಿಗೆ ನಿದ್ರಿಸುತ್ತವೆ, ಒಟ್ಟಿಗೆ ಕಣ್ಣು ಮಿಟುಕಿಸುತ್ತವೆ, ಆದರೆ ಹುಡುಗಿ ನೋಡಿದಾಗ ಒಂದೇ ಕಣ್ಣು ಕೆಲಸ ಮಾಡುತ್ತೆ. ಇದಕ್ಕೆ ಏನು ಹೇಳ್ತಿಯ?

ರಾಜು : ಇದಕ್ಕೆ ನೀತಿ ಇಷ್ಟೇ. ಹುಡುಗಿ ಸ್ನೇಹವನ್ನು ಹಾಳು ಮಾಡ್ತಾಳೆ ಅಂತ.