ಮನೆ ಹಾಸ್ಯ ಹಾಸ್ಯ

ಹಾಸ್ಯ

0

ತಂದೆ : ಚೌಡಯ್ಯನವರ ಹೆಸರು ಕೇಳಿದೀಯೇನೋ ?

ರಾಜು : ಕೇಳಿದೀನಿ ಕಣಪ್ಪಾ.

ತಂದೆ : ಅವರ ಪಿಟೀಲು ಕೇಳಿದಿಯಾ  ?

ರಾಜು : ಓ! ಅವತ್ತೇ ಕೇಳಿದೆ ಆದರೆ ಅವರು ಕೊಡಲ್ಲ ಅಂದ್ರು.

***

ಕಿಟ್ಟು : ರಾಜು, ಯಾಕೋ ಕೆನರಾ ಬ್ಯಾಂಕಿನಲ್ಲಿದ್ದ ನಿನ್ನ ಖಾತೆ ಕ್ಲೋಸ್ ಮಾಡಿದೆಯಂತೆ ?

ರಾಜು : ನೆನ್ನೆ ರಾತ್ರಿ ನನಗೊಂದು ಕನಸು ಬಿತ್ತು. ಯಾರೋ ನನ್ನ ಕೊಲೆ ಮಾಡಿದ ಹಾಗೆ.

ಕಿಟ್ಟು : ಅಲ್ಲೋ ನಿನ್ನ ಕನಸಿಗೂ ಖಾತೆ ಕ್ಲೋಜ್ ಮಾಡೋಕು ಏನೋ ಸಂಬಂಧ ?

ರಾಜು : “ಯುವರ್ ಡ್ರೀಮ್ಸ್ ಕಮ್ಸ್ ಟ್ರೂ” ಅಂದ ಬ್ಯಾಂಕಿನವರ ಸ್ಲೋಗನ್ನಿನಲ್ಲಿ  ಹೇಳಿದ್ದಾರಲ್ಲ. 

***

ರಾಜು : ಲೇ ಗೀತಾ, ನಾನು ರಾತ್ರಿಯೆಲ್ಲಾ ಕುಳಿತು ಬರುದ್ನಲ್ಲಾ ಆ ಕವಿತೆ ಇಲ್ಲಿಟ್ಟಿದ್ದೆ. ಅದು ಕಾಣಿಸ್ತಾ ಇಲ್ಲ. ಮಗ ಗುಂಡ ಏನಾದರೂ ಹರಿದು ಹಾಕ್ಬಿಟ್ಟೆನು ಅಂತ ?

ಗೀತಾ : ರೀ, ಅವನು ಖಂಡಿತಾ ಹರಿದು ಹಾಕಿರೊಲ್ಲ

ರಾಜು : ಅದೇಗೆ ಹೇಳ್ತೀಯಾ ?

ಗೀತ : ಅವನಿಗೆ ಇನ್ನು ಓದೋಕೆ ಬರಲ್ಲ.