ಮನೆ ರಾಜ್ಯ ಚಂದ್ರಗ್ರಹಣ: ಮಧ್ಯಾಹ್ನದ ನಂತರ ದೇವಾಲಯ ಪ್ರವೇಶಕ್ಕೆ ನಿರ್ಬಂಧ

ಚಂದ್ರಗ್ರಹಣ: ಮಧ್ಯಾಹ್ನದ ನಂತರ ದೇವಾಲಯ ಪ್ರವೇಶಕ್ಕೆ ನಿರ್ಬಂಧ

0

ಮಂಡ್ಯ: ಇಂದು ಚಂದ್ರಗ್ರಹಣ ಹಿನ್ನಲೆ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಇಂದು  ಮಧ್ಯಾಹ್ನದ ನಂತರ ದೇಗುಲಗಳಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಜೆ ದೇಗುಲಗಳಲ್ಲಿ ಗ್ರಹಣಕಾಲದ ಶುದ್ಧೀಕರಣ ಕಾರ್ಯ ನಡೆಯಲಿದ್ದು, ಗ್ರಹಣ ಕಾಲದಲ್ಲಿ ದೋಷ ನಿವಾರಣೆ ದೇವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ.

ಶ್ರೀರಂಗಪಟ್ಟಣದ ರಂಗನಾಥ, ಗಂಜಾಮ್ ನಿಮಿಷಾಂಭ, ಮದ್ದೂರಿನ ಹೊಳೆ ಆಂಜನೇಯ, ಚುಂಚನಗಿರಿಯ ಕಾಲ ಭೈರವೇಶ್ವರ ದೇಗುಲ, ಮಂಡ್ಯದ ಲಕ್ಷ್ಮಿ ಜನಾರ್ಧನ ದೇಗುಲ ಸೇರಿ ಹಲವು ದೇಗುಲದ ಬಾಗಿಲು ಬಂದ್ ಆಗಲಿದೆ.

ಗ್ರಹಣದ ಹಿನ್ನಲೆಯಲ್ಲಿ ಭಕ್ತರು ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸುತ್ತಿದ್ದಾರೆ.