ಮನೆ ರಾಜ್ಯ ಕೊಳ್ಳೇಗಾಲ: ಕಾರ್ಮಿಕ ಇಲಾಖೆಯ ಉಪನಿರ್ದೇಶಕರ ಮನೆ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಳ್ಳೇಗಾಲ: ಕಾರ್ಮಿಕ ಇಲಾಖೆಯ ಉಪನಿರ್ದೇಶಕರ ಮನೆ ಮನೆ ಮೇಲೆ ಲೋಕಾಯುಕ್ತ ದಾಳಿ

0

ಕೊಳ್ಳೇಗಾಲ: ಬೆಂಗಳೂರಿನ ಕಾರ್ಮಿಕ ಇಲಾಖೆಯ (ಬೈಉರ್ ವಿಭಾಗ) ಉಪನಿರ್ದೇಶಕರ ಮನೆ ಮೇಲೆ ಇಂದು(ಸೋಮವಾರ) ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ನಗರದ ಬಡಾವಣೆಯಲ್ಲಿ ದಾಳಿ ನಡೆಸಿದ್ದಾರೆ.

ನಗರದ ಮೊಳೆಬಡಾವಣೆಯಲ್ಲಿರುವ ಉಪನಿರ್ದೇಶಕ ಶ್ರೀನಿವಾಸ್‌ ಅವರಿಗೆ ಸೇರಿದ ಎರಡು ಮನೆಗಳ ಮೇಲೆ ಮತ್ತು ಒಂದು ತೋಟದ ಮನೆಯ ಮೇಲೆ, ಶ್ರೀನಿವಾಸ್ ಅವರ ಭಾವ, ಮಾಜಿ ನಗರ ಸಭಾ ಸದಸ್ಯ ನಟರಾಜ ಅವರ ಸಹೋದರ ಮಾದೇಶ ರವರ ಮನೆ, ಅವರ ಸಂಬಂಧಿಕರ ಮನೆಗಳ ಮೇಲೆ ಸುಮಾರು 8 ಗಂಟೆಗೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಿಂದ ಬಂದ ಲೋಕಾಯುಕ್ತರು ಸುಮಾರು 3 ಗಂಟೆಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮನೆಯಲ್ಲೂ ಶೋಧ ಮಾಡುತ್ತಿದ್ದಾರೆ.