ಮನೆ ರಾಜಕೀಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಅಮಿತ್‌ ಶಾ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಅಮಿತ್‌ ಶಾ

0

ಬೆಂಗಳೂರು (Bengaluru)- ʻನಾಯಕತ್ವದ ಬದಲಾವಣೆ ಊಹಾಪೋಹಗಳಿಗೆ ಕಿವಿಗೊಡದೇ ಕೆಲಸ ಮಾಡಿʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಆ ಮೂಲಕ ಬೊಮ್ಮಾಯಿಗೆ ಅಮಿತ್‌ ಶಾ ಅವರು ಅಭಯ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯೂ ಸಹ ನಿಮ್ಮ ನೇತೃತ್ವದಲ್ಲೇ ನಡೆಯಲಿದೆ ಎಂದು ಬೊಮ್ಮಾಯಿಗೆ ಬಿಜೆಪಿ ವರಿಷ್ಠ ಅಮಿತ್ ಶಾ ಭರವಸೆ ನೀಡಿದ್ದಾರೆ. 

ಊಹಾಪೋಹಗಳು ಉಂಟಾಗಿರುವಂತೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಅಭಿವೃದ್ಧಿಯತ್ತ ಗಮನ ಕೊಡಿ. ನಾವು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಆದರಿಂದಲೇ ಯಶಸ್ಸು ಗಳಿಸಿದ್ದೇವೆ. ಯುವಕರಿಗೆ ಸಂಬಂಧಿಸಿದ ಯೋಜನೆಗಳತ್ತ ಗಮನ ಹರಿಸಿ ಎಂದು ಅಮಿತ್ ಶಾ ಸಿಎಂ ಗೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ. 

ಇದೇ ವೇಳೆ ನಿಮ್ಮೊಂದಿಗೆ ಯಡಿಯೂರಪ್ಪ ಸಹ ಚುನಾವಣೆ ತಂತ್ರದಲ್ಲಿ ಸಹಕರಿಸಲಿದ್ದಾರೆ ಎಂದು ಅಮಿತ್ ಶಾ ಸಿಎಂಗೆ ಹೇಳಿರುವುದು ತಿಳಿದುಬಂದಿದೆ.