ಮನೆ ಕಾನೂನು ರೈತನಿಂದ ₹4500 ಲಂಚ:ಸೆಸ್ಕ್‌ ಜೂನಿಯರ್‌ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ

ರೈತನಿಂದ ₹4500 ಲಂಚ:ಸೆಸ್ಕ್‌ ಜೂನಿಯರ್‌ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ

0

ಹಲಗೂರು:ಟ್ರಾನ್ಸ್‌ ಫಾರ್ಮರ್‌ ಬದಲಿಸಿಕೊಡಲು ರೈತನಿಂದ ₹4500 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಸೆಸ್ಕ್‌ ಶಾಖಾಧಿಕಾರಿ ಕಚೇರಿ ಜೂನಿಯರ್ ಎಂಜಿನಿಯರ್ ಚಂದ್ರಶೇಖರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ಲಿಂಗಪಟ್ಟಣ ಗ್ರಾಮದ ಪುಟ್ಟಸ್ವಾಮಿ ರವರು ಜಮೀನಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ಕೋರಿದ್ದು,ಈ ವೇಳೆ ಚಂದ್ರಶೇಖರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು..
ಈ ಬಗ್ಗೆ ರೈತ ಲೋಕಾಯುಕ್ತರಿಗೆ ದೂರು ನೀಡಿದ್ದು,ಅವರ ಸೂಚನೆ ಮೇರೆಗೆ ಬುಧವಾರ ಮಧ್ಯಾಹ್ನ ಕಚೇರಿ ಸಮೀಪ ಹಣ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.