ಮನೆ ಅಪರಾಧ ಅಪ್ರಾಪ್ತಿಯನ್ನು ಅಪಹರಿಸಿ ಮದುವೆಯಾದ ವ್ಯಕ್ತಿಯ ಬಂಧನ

ಅಪ್ರಾಪ್ತಿಯನ್ನು ಅಪಹರಿಸಿ ಮದುವೆಯಾದ ವ್ಯಕ್ತಿಯ ಬಂಧನ

0

ಮೈಸೂರು (Mysuru)- ಮದುವೆ ಮನೆಯಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪ್ರತಾಪ್ ಬಂಧಿತ ಆರೋಪಿ. ನಗರದ ಗೋಕುಲಂ ಬಡಾವಣೆಯಲ್ಲಿರುವ ಶಿವಮ್ಮ‌ಮಹದೇವಪ್ಪ ಚೌಟ್ರಿಯಿಂದ ಬಾಲಕಿಯನ್ನು ಆರೋಪಿಸಲಾಗಿತ್ತು.

ಸಂಬಂಧಿಕರ ಮದುವೆಗೆ ಪೋಷಕರೊಂದಿಗೆ ಮೇ 4 ರಂದು ಮದುವೆಗೆ ಬಂದಿದ್ದ ಬಾಲಕಿ ರಾತ್ರಿ ಚೌಟ್ರಿಯಲ್ಲೇ ತಂಗಿದ್ದರು. ಬೆಳಿಗ್ಗೆ ಎದ್ದಾಗ ಬಾಲಕಿ ಚೌಟ್ರಿಯಿಂದ ನಾಪತ್ತೆಯಾಗಿದ್ದಳು.  

ಪ್ರತಾಪ್‌ ಬಾಲಕಿಯನ್ನು ಅಪಹರಿಸಿ ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಾನೆ. ಪ್ರತಾಪ್ ವಿರುದ್ದ ಕಿಡ್ನಾಪ್ ಹಾಗೂ ಚೆಲ್ಡ್ ಮ್ಯಾರೇಜ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇದೀಗ ವಿ.ವಿ.ಪುರಂ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ಆಕೆಯನ್ನು ಬಾಲಮಂದಿರದ ಕಳುಹಿಸಲಾಗಿದೆ. ಈ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.