ಮನೆ ಸುದ್ದಿ ಜಾಲ ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ಯಶ್​ ಪರಿಹಾರ ತಂಡದಿಂದ ತಲಾ 5 ಲಕ್ಷ ರೂ....

ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ಯಶ್​ ಪರಿಹಾರ ತಂಡದಿಂದ ತಲಾ 5 ಲಕ್ಷ ರೂ. ಚೆಕ್ ವಿತರಣೆ

0

ಗದಗ: ಕಳೆದ ವಾರ ಮೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಟೌಟ್​ ನಿಲ್ಲಿಸುವ ವೇಳೆ ವಿದ್ಯುತ್​​ ತಗುಲಿ ಮೂವರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಹಲೋಕ ತ್ಯಜಿಸಿದ ಅಭಿಮಾನಿಗಳ ಕುಟುಂಬದವರಿಗೆ ರಾಕಿಂಗ್​ ಸ್ಟಾರ್​ ಯಶ್​ ಪರಿಹಾರ ತಂಡದಿಂದ ವಿತರಿಸಲಾಗಿದೆ.

ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿದೆ.

ನಟ ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಇಂದು ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ, ಮನೆ ಮಕ್ಕಳನ್ನು ಕಳೆದುಕೊಂಡಿರುವ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ, 5 ಲಕ್ಷ ರೂ. ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ.

 ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನವರಿ 07 ರ ರಾತ್ರಿ ದುರಂತ ಸಂಭವಿಸಿತ್ತು. ಯಶ್​ ಹುಟ್ಟುಹಬ್ಬದ ಕಟೌಟ್​ ನಿಲ್ಲಿಸಲು ಮುಂದಾಗಿದ್ದ ಮೂವರು ಯುವಕರು ವಿದ್ಯುತ್​ ತಗುಲಿ ಮೃತಪಟ್ಟಿದ್ದರು. ಸೂರಣಗಿಯ ಮುರಳಿ, ನವೀನ ಹಾಗೂ ಹನಮಂತ ಎಂಬುವರು ಪ್ರಾಣ ಕಳೆದುಕೊಂಡಿದ್ದರು. ಈ ಮೂವರ ಕುಟುಂಬಕ್ಕೂ ತಲಾ ಐದು ಲಕ್ಷ ರೂ. ಚೆಕ್​ ವಿತರಣೆ ಮಾಡಲಾಗಿದೆ. ಘಟನೆಯಲ್ಲಿ ಇತರೆ ಮೂವರು ಯುವಕರಿಗೆ ಗಾಯಗೊಂಡಿದ್ದರು.