ಮನೆ ರಾಷ್ಟ್ರೀಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: 11ದಿನಗಳ ಉಪವಾಸ ಕೊನೆಗೊಳಿಸಿದ ಪ್ರಧಾನಿ ಮೋದಿ

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: 11ದಿನಗಳ ಉಪವಾಸ ಕೊನೆಗೊಳಿಸಿದ ಪ್ರಧಾನಿ ಮೋದಿ

0

ಅಯೋಧ್ಯೆ: ಹಲವು ಶತಮಾನಗಳ ಕಾಯುವಿಕೆ, ತಪಸ್ಸಿಗೆ ಇಂದು ಫ‌ಲ ಸಿಕ್ಕಿತು. ಇದರೊಂದಿಗೆ ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿಯಲ್ಲಿ ಉದ್ಘಾಟನೆಗೊಂಡಿತು.

ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 11 ದಿನಗಳ ಉಪವಾಸವನ್ನು ಸಹ ಕೊನೆಗೊಳಿಸಿದರು.

ಸಂತ ಸ್ವಾಮಿ ಗೋವಿಂದ್ ದೇವ್ ಅವರು ಪ್ರಧಾನಿ ಅವರಿಗೆ ಚರಣಾಮೃತವನ್ನು ಕುಡಿಸುವ ಮೂಲಕ ಹನ್ನೊಂದು ದಿನಗಳ ಕಾಲ ಆಚರಣೆ ಮಾಡಿದ್ದ ವೃತವನ್ನು ಕೊನೆಗೊಳಿಸಿದರು.

ಇದಕ್ಕೂ ಮುನ್ನ ತಮ್ಮ ಭಾಷಣದ ವೇಳೆ ಭಾವುಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ ಸಂತರು, ಛತ್ರಪತಿ ಶಿವಾಜಿ ಮಹಾರಾಜರ ನಂತರ ಕಠೋರ ತಪಸ್ಸಿಗೆ ಹೆದರದ ಇಂತಹ ರಾಜ ದೇಶಕ್ಕೆ ಸಿಕ್ಕಿದ್ದಾರೆ ಎಂದು ಹೇಳಿದರು.

ಸಂತ ಸ್ವಾಮಿ ಗೋವಿಂದ್ ದೇವ್ ಅವರು ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾ ನಂತರ ವೇದಿಕೆಯಿಂದ ಪ್ರಧಾನ ಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಮೂರು ದಿನ ಉಪವಾಸ ಮಾಡಬೇಕು ಎಂದು ಹೇಳಿದ್ದೆವು ಆದರೆ ನಮ್ಮ ಪ್ರಧಾನಿ 11 ದಿನ ಉಪವಾಸ ಮಾಡಿದರು. ನಾವು ಒಂದು ಹೊತ್ತಿನ ಊಟ ಮಾಡೋಣ ಎಂದು ಕೇಳಿದಾಗ ಅವರು ಆಹಾರ ತ್ಯಜಿಸಿ ಹಣ್ಣುಗಳನ್ನೇ ತಿಂದರು. ನಾವು ಅವರಿಗೆ ಒಂದು ಹೊದಿಕೆಯೊಂದಿಗೆ ಮಲಗಲು ಹೇಳಿದೆವು ಆದ್ದರಿಂದ ಅವರು ಇಡೀ ಆಚರಣೆಯ ಸಮಯದಲ್ಲಿ ಅದೇ ಹೊದಿಕೆಯಲ್ಲಿ ಮಲಗಲು ವಾಗ್ದಾನ ಮಾಡಿದರು. ಇಲ್ಲಿನ ಚಳಿಯನ್ನೂ ಲೆಕ್ಕಿಸದೆ ಕಠಿಣ ವೃತವನ್ನು ಆಚರಿಸುವ ಮೂಲಕ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾನು ಶಿವಾಜಿ ಮಹಾರಾಜರನ್ನು ಉಲ್ಲೇಖಿಸಲು ಬಯಸುತ್ತೇನೆ ಎಂದು ಹೇಳಿದ ಅವರು ಭಾರತದ ಶ್ರೇಷ್ಠ ಸಂಪ್ರದಾಯದಲ್ಲಿ ಶಿವಾಜಿ ಮಹಾರಾಜರಂತಹ ರಾಜ ಇರಲಿಲ್ಲ ಎಂದು ಪೂಜ್ಯ ಸಂತರು ಹೇಳಿದರು.

ಈಗ ನಮಗೆ ನರೇಂದ್ರ ಮೋದಿಯ ರೂಪದಲ್ಲಿ ಅಂತಹ ರಾಜ ಸಿಕ್ಕಿದ್ದಾರೆ ಎಂದು ಹೇಳಿದರು.