ಮನೆ ರಾಜ್ಯ ಶ್ರೀರಂಗಪಟ್ಟಣ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಸೋಮು ಆಯ್ಕೆ

ಶ್ರೀರಂಗಪಟ್ಟಣ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಸೋಮು ಆಯ್ಕೆ

0

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ವಕೀಲರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ವಕೀಲ ಸಿ.ಕೆ.ಸೋಮು ಅಧ್ಯಕ್ಷರಾಗಿ, ಕೃಪಾಶ್ರೀ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿಯ 5 ವರ್ಷಗಳ ಅವಧಿಗೆ ಪದಾಧಿಕಾರಿಗಳ ಚುನಾವಣೆ ನಡೆಯಿತು. ಅಧ್ಯಕ್ಷ ಉಪಾಧ್ಯಕ್ಷರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಸಂಘದ ನಿರ್ದೇಶಕ ರಾಗಿ ಹಿರಿಯ ವಕೀಲ ಮೂರ್ತಿ, ಗಂಗರಾಜು, ಇಂದ್ರಕುಮಾ‌ರ್ ರೆಡ್ಡಿ, ಎ.ಕುಮಾರ್, ವೈದ್ಯನಾಥ ಶಿವರಾಮು, ಎಂ. ಪಿ.ಪರಮೇಶ, ಮೈನಾವತಿ, ಪುಷ್ಪಲತಾ, ಸೌಮ್ಯ, ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸುಮಿತ್ರಾ ತಿಳಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರಿಗೆ ಲಾಟರಿ: ಅಧ್ಯಕ್ಷರ ಸ್ಥಾನಕ್ಕೆ ಸಿ.ಕೆ.ಸೋಮು ಹಾಗೂ ಇಂದ್ರಕುಮಾರ ರೆಡ್ಡಿ ರವರು ಸ್ಪರ್ಧಿಸಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಎನ್.ವೈದ್ಯನಾಥ ಹಾಗೂ ಕೃಪಾಶ್ರೀ ಸ್ಪರ್ಧಿಸಿದ್ದರು. ಗೌಪ್ಯ ಮತದಾನದ ಮೂಲಕ ಚುನಾವಣೆ ನಡೆದಿದ್ದು, ಚುನಾವಣಾ ಫಲಿತಾಂಶದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಇಬ್ಬರಿಗೂ ತಲಾ 6 ಮತಗಳು ಬಂದು ಟೈ ಆಯಿತು. ನಂತರ ಸಹಕಾರ ಸಂಘದ ಕಾಯ್ದೆ ಪ್ರಕಾರ ಚುನಾವಣಾಧಿಕಾರಿಗಳು ಲಾಟರಿ ಎತ್ತುವ ಮುಖಾಂತರ ಆಯ್ಕೆ ಮಾಡಲು ಕ್ರಮ ವಹಿಸಿ ಲಾಟರಿಯಲ್ಲಿ ಅಧ್ಯಕ್ಷರಾಗಿ ಸಿ.ಕೆ.ಸೋಮು, ಉಪಾಧ್ಯಕ್ಷರ ಸ್ಥಾನಕ್ಕೆ ಎ.ಎಸ್.ಕೃಪಾಶ್ರೀ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪವನ್ ಗೌಡ, ಶಿವರಾಜು, ಜಯಂತಿ ಇತರರಿದ್ದರು.