ಮನೆ ರಾಜ್ಯ ರೈತನ ಜಮೀನಿನಲ್ಲಿ ವಾಮಾಚಾರ

ರೈತನ ಜಮೀನಿನಲ್ಲಿ ವಾಮಾಚಾರ

0

ಶ್ರೀರಂಗಪಟ್ಟಣ:ತಾಲೂಕಿನ ಬೆಳಗೊಳ ಗ್ರಾಮದ ರೈತ ಹಾಗೂ ಗ್ರಾ.ಪಂ.ಅಧ್ಯಕ್ಷ ಬಿ.ವಿ. ಸುರೇಶ್ ಅವರ ಜಮೀನಿನಲ್ಲಿ ರಾತ್ರಿ ಸಮಯದಲ್ಲಿ ವಾಮಾಚಾರ ಮಾಡಿರುವ ಘಟನೆ ನಡೆದಿದೆ.


ಜಮೀನಿಗೆ ಹೋಗುವ ಉದ್ದಿಯ ಮೇಲಿನ ಭಾಗ ವಾಮಾಚಾರ ಮಾಡಿರುವ ಕುರುಹುಗಳು ಪತ್ತೆಯಾಗಿದ್ದು,ವಾಮಾಚಾರಕ್ಕೆ ನಿಂಬೆಹಣ್ಣು ಕುಡಿಕೆ,ರಕ್ತ, ತಗಡು,ಅರಿಶಿನ ಕುಂಕುಮ ಹಚ್ಚಿ ವಾಮಾಚಾರ ಮಾಡಿದ್ದಾರೆ. ಯಾರೊ ತಮ್ಮ ಜಮೀನಿನಲ್ಲಿ ಬುಧವಾರ ರಾತ್ರಿ ಬಂದು ವಾಮಾಚಾರ ನಡೆಸಿದ್ದು, ಗುರುವಾರ ಎಂದಿನಂತೆ ಜಮೀನಿಗೆ ಬಂದ ವೇಳೆ ನನಗೆ ಈ ವಾಮಾಚಾರದ ಕುರುಹುಗಳು ಕಂಡು ಅಕ್ಕ ಪಕ್ಕದ ರೈತರಿಗೂ ಇದನ್ನು ತೋರಿಸಿದ್ದೇನೆ ಏನು ಕಾರಣಕ್ಕೆ ನಮ್ಮ ಜಮೀನಿನಲ್ಲಿ ವಾಮಚಾರ ಮಾಡಿದ್ದಾರೋ ತಿಳಿಯುತ್ತಿಲ್ಲ ಇದರಿಂದ ನಮಗೆ ಭಯದ ವಾತವರಣ ಇದ್ದರೂ ಅವರಿಗೆ ಏನು ಸಿಗುತ್ತದೆ ಎಂದು ಈ ಕೆಲಸ ಮಾಡಿದ್ದಾರೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ವಾಮಾಚಾರ ನಡೆಸಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.