ಮನೆ ರಾಜಕೀಯ ಜಿಲ್ಲೆಯ ಐವರು ಪ್ರಭಾವಿಗಳು ಬಿಜೆಪಿ ಸೇರ್ಪಡೆ: ಎಸ್.ಟಿ.ಸೋಮಶೇಖರ್

ಜಿಲ್ಲೆಯ ಐವರು ಪ್ರಭಾವಿಗಳು ಬಿಜೆಪಿ ಸೇರ್ಪಡೆ: ಎಸ್.ಟಿ.ಸೋಮಶೇಖರ್

0

ಹುಣಸೂರು(Hunusur): ವಿಧಾನಪರಿಷತ್ ಚುನಾವಣೆ ಬಳಿಕ ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದ್ದು, 5 ರಿಂದ 6 ಜನ ಪ್ರಭಾವಿ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ನಡೆದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಎರಡನೇ ಹಂತದಲ್ಲಿ ಪಕ್ಷ ಸೇರ್ಪಡೆ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಹುಣಸೂರು ಸೇರಿದಂತೆ ಬಿಜೆಪಿ ಪಾಲು ಹೆಚ್ಚಾಗಲಿದೆ. 11 ಕ್ಷೇತ್ರದಲ್ಲಿ 3 ಸ್ಥಾನದಲ್ಲಿದ್ದೇವೆ. ಈ ಸ್ಥಾನವನ್ನು 3ರಿಂದ 6ಕ್ಕೆ ತರಬೇಕು ಎಂಬ ಸೂಚನೆ ಇದೆ ಎಂದರು.

ಜಿ.ಟಿ. ದೇವೇಗೌಡರು ಮರಳಿ ಬಿಜೆಪಿ ಸೇರುವ ಬಗ್ಗೆ ಪ್ರಸ್ತಾಪಿಸಿ ಅವರು, ಸಮಿತಿ ರಚಿಸಿದ್ದು ನನ್ನ ಹೆಗಲಿಗೆ ಹೊಣೆ ನೀಡಿದ್ದಾರೆ. ಸಂಘಟನೆ ಮತ್ತು ಪಕ್ಷ ಸೇರ್ಪಡೆ ಕೆಲಸ ಮುಂದುವರಿಯಲಿದೆ ಎಂದರು.

ರಾಜ್ಯದಲ್ಲಿ ಎದ್ದಿರುವ ಭ್ರಷ್ಟಾಚಾರ ಕೂಗು ಈ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಸರ್ಕಾರದ ಗಮನಕ್ಕೆ ಬಂದ ನಂತರದಲ್ಲಿ ಈಗಾಗಲೇ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ’ ಎಂದರು.