ಮನೆ ಸುದ್ದಿ ಜಾಲ ಬಸ್-ಕ್ಯಾಂಟರ್‌ ನಡುವೆ ಅಪಘಾತ: ಓರ್ವನಿಗೆ ಗಾಯ

ಬಸ್-ಕ್ಯಾಂಟರ್‌ ನಡುವೆ ಅಪಘಾತ: ಓರ್ವನಿಗೆ ಗಾಯ

0

ಮೈಸೂರು (Mysuru)-ಕೆಎಸ್‌ಆರ್‌ ಟಿಸಿ ಬಸ್‌ ಮತ್ತು ಕ್ಯಾಂಟರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಘಟನೆ ಕೆ.ಆರ್.ತಾಲೂಕಿನಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರದ ಬಳಿ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಚಾಲಕನ ಕಾಲು  ಮುರಿದಿದೆ. ಗಾಯಾಳುಗಳನ್ನು ಕೆ.ಆರ್. ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.