ಮನೆ ಸುದ್ದಿ ಜಾಲ ಸೋರುತ್ತಿದೆ ಕೋಟೆ ಗಣಪತಿ ದೇವಸ್ಥಾನ: ಅಪಾಯಕ್ಕೆ ಆಹ್ವಾನ

ಸೋರುತ್ತಿದೆ ಕೋಟೆ ಗಣಪತಿ ದೇವಸ್ಥಾನ: ಅಪಾಯಕ್ಕೆ ಆಹ್ವಾನ

0

ಮೈಸೂರು (Mysuru)-ಮೈಸೂರಿನ ಪುರಾತನ ದೇವಾಲಯಗಳಲ್ಲಿ ಕೋಟೆ ಗಣಪತಿ ದೇವಸ್ಥಾನವೂ ಕೂಡ ಒಂದು. ಈ ದೇವಾಲಯದ ಪ್ರಾಂಗಣ ಸೋರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ದೇವಾಲಯಕ್ಕೆ ಬರುವ ಭಕ್ತರು ನೀರಿನಲ್ಲೇ ನಿಂತು ದರ್ಶನ ಪಡೆಯಬೇಕಾದ ಪರಿಸ್ಥಿತಿ ಬಂದಿದೆ.

ಅಲ್ಲದೆ, ವಿದ್ಯುತ್ ವೈರ್ ಗಳು ಸಹ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅಡುಗೆ ಮನೆ ಕೋಣೆಯಲ್ಲಿ ವಿದ್ಯುತ್ ಸರಬರಾಜಾಗುವ ವೈರ್ ಗಳ ಮೇಲೆ ನೀರು ಸೋರುತ್ತಿದೆ. ಇದರಿಂದ ಯಾವ ಸಂದರ್ಭದಲ್ಲಾದರೂ ಅಪಾಯ ಸಂಭವಿಸಬಹುದು.

ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಅವರು ಎಚ್ಚೆತ್ತುಕೊಂಡು ದೇವಸ್ಥಾನದ ದುರಸ್ಥಿ ಕಾರ್ಯ ಮಾಡಿಸಬೇಕಾಗಿದೆ.