ಮನೆ ಅಪರಾಧ ರಾಮನಗರ: ತಂದೆಯಿಂದಲೇ ಮಗನ ಕೊಲೆ

ರಾಮನಗರ: ತಂದೆಯಿಂದಲೇ ಮಗನ ಕೊಲೆ

0

ರಾಮನಗರ: ತಂದೆಯೇ ಮಗನ ಕೊಲೆ ಮಾಡಿದ ಭೀಕರ ಘಟನೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಭಾಸ್ಕರ್ (31) ಮೃತ ದುರ್ದೈವಿ. ಕೃಷ್ಣಪ್ಪ ಕೊಲೆ ಆರೋಪಿ. ಹಣಕ್ಕಾಗಿ‌ ಮಚ್ಚಿನಿಂದ ಮಗನ ಮುಖಕ್ಕೆ ಹೊಡೆದ ಅಪ್ಪ ಕೊಂದ ಹಾಕಿದ್ದಾನೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡಿದ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.