ಮನೆ ರಾಜ್ಯ ಮೈತ್ರಿ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್’ಗೆ ಮುನ್ನಡೆ: ಡಿ.ಕೆ.ಸುರೇಶ್ ಗೆ ನಿರಂತರ ಹಿನ್ನಡೆ- ಕ್ಷೇತ್ರದಲ್ಲಿ...

ಮೈತ್ರಿ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್’ಗೆ ಮುನ್ನಡೆ: ಡಿ.ಕೆ.ಸುರೇಶ್ ಗೆ ನಿರಂತರ ಹಿನ್ನಡೆ- ಕ್ಷೇತ್ರದಲ್ಲಿ ಬಿಗಿ ಭದ್ರತೆ

0

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಅವರು 7 ನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದು, ಕನಕಪುರ ಸೇರಿ ಕ್ಷೇತ್ರಾದ್ಯಂತ ಭದ್ರತೆ ಬಿಗಿಗೊಳಿಸಲಾಗುತ್ತಿದೆ.

Join Our Whatsapp Group

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಹಿನ್ನಡೆ ಸಾಧಿಸಿರುವ ಕಾರಣ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಣ್ಣ ಮಟ್ಟಿನ ಆತಂಕ ಕಾಣಿಸಿಕೊಂಡಿದೆ.

50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಡಾ. ಮಂಜುನಾಥ್ ಕಾಯ್ದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಭದ್ರತೆ ಕೈಗೊಳ್ಳಬೇಕು ಎಂದು ಡಾ. ಮಂಜುನಾಥ್ ಅವರು ಚುನಾವಣ ಆಯೋಗಕ್ಕೆ ಪಾತ್ರ ಬರೆದಿದ್ದರು.

ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಎನಿಸಿಕೊಂಡಿದೆ. ಅಂತಿಮ ಫಲಿತಾಂಶಕ್ಕಾಗಿ ಇಡೀ ದೇಶದ ಗಮನವಿದೆ.