ಮನೆ ಸುದ್ದಿ ಜಾಲ ಬೇಲೂರು ಬಿಜೆಪಿ ನಗರ-ಗ್ರಾಮಾಂತರ ಮಂಡಲ ಪ್ರಮುಖರ ಸಭೆ ಯಶಸ್ವಿ

ಬೇಲೂರು ಬಿಜೆಪಿ ನಗರ-ಗ್ರಾಮಾಂತರ ಮಂಡಲ ಪ್ರಮುಖರ ಸಭೆ ಯಶಸ್ವಿ

0

ಹಾಸನ(Hassan): ಜಿಲ್ಲೆಯ ಬೇಲೂರಿನಲ್ಲಿಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಸಂಬಂಧ ಬೇಲೂರು ನಗರ ಮತ್ತು ಗ್ರಾಮಾಂತರ ಮಂಡಲದ ಪ್ರಮುಖರು ಮತ್ತು ಘಟನಾಯಕರ ಸಭೆ ಯಶಸ್ವಿಯಾಗಿ ನಡೆಯಿತು.

ಬೇಲೂರಿನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಮುಖಂಡ ಹೆಚ್.ಕೆ. ಸುರೇಶ್(ಹುಲ್ಲಳ್ಳಿ ಸುರೇಶ್) ರವರು ಭಾಗವಹಿಸಿ ಮತದಾರರ ಸಂಪರ್ಕ ಹಾಗೂ ಚುನಾವಣೆಯ ಬಗ್ಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯರು, ರಾಜ್ಯ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಸಹ ಪ್ರಭಾರಿ ತುಳಸಿ ಮುನಿರಾಜೇಗೌಡ ಮತ್ತು ಹಾಸನ ಜಿಲ್ಲಾ ಪ್ರಭಾರಿ ನಿಜಗುಣರಾಜು ಅವರು ಚುನಾವಣೆಯ ನಿರ್ವಹಣೆಯ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಚುನಾವಣೆಯ ಸಂಚಾಲಕರುಗಳು ಹಾಗೂ ಜಿಲ್ಲಾ ಫ್ರಧಾನ ಕಾರ್ಯದರ್ಶಿಗಳು, ಮಾಜಿ ಶಾಸಕರು ಹಾಗೂ  ಮಂಡಲಗಳ ಅಧ್ಯಕ್ಷರು, ಚುನಾವಣಾ ಘಟನಾಯಕರು ಹಾಗೂ ಪದಾಧಿಕಾರಿಗಳು, ಹಿರಿಯರು, ಮುಖಂಡರುಗಳು, ಕಾರ್ಯಕರ್ತರುಗಳು, ಭಾಗವಹಿಸಿದ್ದರು.