ಟೆನ್ಷನ್ ತಲೆನೋವು
ಆಧುನಿಕ ಜೀವನದಲ್ಲಿ ಇದು ಸರ್ವೇಸಾಧಾರಣವಾದ ತಲೆನೋವು. ಜನಸಂಖ್ಯೆಯ ಶೇಕಡ 90 ಮಂದಿ ಆಗಾಗ ಈ ತಲೆನೋವಿಗೆ ಗುರಿಯಾಗುತ್ತಿರುತ್ತಾರೆಂದರೆ ಅತಿಶಯೋಕ್ತಿಯಲ್ಲ.
ಈ ತಲೆನೋವಿದ್ದರೂ ಕೂಡಾ, ಮನುಷ್ಯರು ತಾವು ಸಾಮಾನ್ಯವಾಗಿ ಮಾಡಿಕೊಳ್ಳುವ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ.
ಟೆನ್ಷನ್ ತಲೆನೋವಿನ ಎರಡು ಪ್ರಕಾರಗಳಿವೆ :
1. ಆಯಾ ಘಟನೆಗಳ ಮೂಲವಾಗಿ ಬರುವಂತಹವು. ಇವುಗಳನ್ನು ಎನ್ನುತ್ತಾರೆ Episodic Headache ಟೆನ್ಷನ್,ಮಾನಸಿಕ ಒತ್ತಡವನ್ನುಂಟುಮಾಡುವ ಘಟನೆಗಳು, ಕೋಪವನ್ನು ಇಲ್ಲವೇ, ಅಂದೋಳನವನ್ನುಂಟು ಮಾಡುವ ಘಟನೆಗಳಿಂದಾಗಿ ಇವು ಬರುತ್ತವೆ.
2. ನಮಗೆ ಬರುವ ತಲೆನೋವುಗಳಲ್ಲಿ ಶೇಕಡ 75ರಿಂದ 80ರಷ್ಟು ತಲೆನೋವುಗಳು ಈ ರೀತಿಯವೇ ಆಗಿರುತ್ತವೆ.
3.ಕ್ರಾನಿಕ್ ತಲೆನೋವುಗಳು,ಎಷ್ಟೋ ದಿನಗಳಿಂದ ಬಿಡದೆ ಕಾಡುತ್ತಿರುವ ಆಂದೋಲನ,ಇಲ್ಲವೇ ಮನುಷ್ಯರಲ್ಲಿ ಅಂತರ್ಗತವಾಗಿ ಅಡಗಿಕೊಂಡಿರುವ ಖಿನ್ನತೆ ಮೊದಲಾದವು, ಕ್ರಾನಿಕ್ ರೀತಿಯ ತಲೆನೋವಿಗೆ ಕರಣೀ ಭೂತವಾಗಿರುತ್ತವೆ.
ಲಕ್ಷಣಗಳು
★ಸಾಧಾರಣವಾಗಿ ಸಂಜೆಯ ವೇಳೆಗೆ ಬರುತ್ತದೆ. ಹಗಲಿನ ಕೆಲಸಗಳಿಂದ ಅಷ್ಟು ಹೊತ್ತಿಗೆ ಆ ವ್ಯಕ್ತಿ ಪೂರ್ಣವಾಗಿ ಆಯಾಸಗೊಂಡಿರುತ್ತಾನೆ.
★ ಹಣೆಯ ಸುತ್ತ ಹುರಿಯಿಂದ ಬಿಗಿದು ಕಟ್ಟಿದಂತೆ ನೋವು
★ ತಲೆ ಮತ್ತೇರಿದಂತಿರುತ್ತದೆ.
★ಕಣತಲೆಯಲ್ಲಿ ಸೂಜಿಗಳಿಂದ ಚುಚ್ಚುತ್ತಿರುವಂತೆ ನೋವು
★ಹಣೆ, ಕತ್ತು,ಕಣತಲೆ ಬಹಳ ಸೂಕ್ಷ್ಮವಾಗುತ್ತವೆ.
ಎಷ್ಟು ಹೊತ್ತು ಇರುತ್ತದೆ?
★ತೀವ್ರವಾದ ನೋವು ಕೆಲವು ಗಂಟೆಗಳವರೆಗೂ ಇರುತ್ತದೆ. ಟೆನ್ಷನ್ ಅನುಭವ ಮಾತ್ರ ಇನ್ನೂ ಹೆಚ್ಚು ಹೊಂದಿರಬಹುದು.
★ಕೆಲವರಿಗೆ ಈ ತಲೆನೋವು ದಿನಗಟ್ಟಲೆ, ತಿಂಗಳುಗಟ್ಟಲೆ, ಐ ಕೆಲವು ವರ್ಷಗಳವರೆಗೂ ಕೂಡಾ ಆಗಾಗ ಬರುತ್ತಿರಬಹುದು.
ಕಾರಣಗಳು
★ ಒಂದೇ ಸಮನೆ ಒಂದು ವಿಷಯದ ಮೇಲೆಯೇ, ಬಹಳ ಹೊತ್ತು ಆಲೋಚನೆಗಳನ್ನು ಕೇಂದ್ರೀಕರಿಸಿದಾಗ ನೆತ್ತಿಯ ಸ್ನಾಯುಗಳು ಸಂಕೋಚ ಗೊಳ್ಳುವುದರಿಂದ ಬರುತ್ತದೆ.
★ ಕನ್ನಡಕಗಳನ್ನು ಉಪಯೋಗಿಸುವ ಅಗತ್ಯವಿದ್ದರೂ ಕೂಡಾ(ಅಂದರೆ ದೃಷ್ಟಿ ದೋಷವಿದ್ದಾಗ),ಅವುಗಳನ್ನು ಉಪಯೋಗಿಸಿದವರಿಗೆ ಇದು ಹೆಚ್ಚಾಗಿ ಬರುತ್ತದೆ.
★ ಭಾವನಾತ್ಮಕ ಒತ್ತಡಗಳಿಗೆ ಒಳಗಾಗುವವರಿಗೆ ಬರುತ್ತದೆ.ಖಿನ್ನತೆಯಿಂದ ಬಾಧೆ ಪಡುತ್ತಿರುವವರಿಗೆ ಆತಂಕ, ಆಂದೋಳನೆಗೆ ಒಳಗಾಗುವವರಿಗೆ ಟೆನ್ಷನ್ ತಲೆನೋವು ಆಗಾಗ ಬರುವುದು ಸಹಜ.
ಗೃಹ ಚಿಕಿತ್ಸೆ
★ ತಲೆನೋವಿನಿಂದ ನರಳುವ ವ್ಯಕ್ತಿ ಮಾಡಬೇಕಾದ ಮುಖ್ಯವಾದ ಕೆಲಸವೆಂದರೆ, ಅವುಗಳಿಗೆ ಮೂಲ ಕಾರಣವಾದ ಮಾನಸಿಕ ಒತ್ತಡಗಳಿಂದ, ವೇದನೆಗಳಿಂದ ದೂರವಾಗುವುದು, ಅಂತಹ ಘಟನೆಗಳಿಗೆ ಪ್ರಶಾಂತ ಮನೋಭಾವದಿಂದ ಸ್ಪಂದಿಸುವುದು.
★ ಸರಿಯಾಗಿ ನಿದ್ರೆ ಮಾಡಬೇಕು.
★ ಕತ್ತಿನ ಮೇಲೆ ತಲೆಯ ಮೇಲೆ ಮಸಾಜ್ ಮಾಡಿಸಿಕೊಳ್ಳುವುದರಿಂದ ಒಳ್ಳೆಯ ಉಪಶಮನ ದೊರಕುತ್ತದೆ.
★ಪ್ಯಾರಾಸಿಟಮಾಲ್ ನಂತಹ ಸಾಮಾನ್ಯ ನೋವು ನಿವಾರಕಗಳನ್ನು ಸೂಚಿತ ಪ್ರಮಾಣದಲ್ಲಿ ಸೇವಿಸುವುದು .
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.