ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು:-
★ ತಲೆನೋವು ಬಹಳ ತೀವ್ರವಾಗಿದ್ದು ಆಗಿಂದಾಗ ಬರುತ್ತಿರುವಾಗ ತಲೆನೋವಿನ ಜೊತೆ ಹೊಟ್ಟೆತೊಳಸು, ವಾಂತಿ ಯಿದ್ದರೆ.
★ಮತ್ಯಾವುದೋ ತೀರ ರೋಗ ಇದೆ ಯೆಂಬ ಕಾತುರ, ಚಿಂತೆಗಳಿದ್ದರೆ.
★ತಲೆನೋವು ಆಗಿಂದಾಗ ಬಿಡದೆ ಬರುತ್ತಾ, ದೃಷ್ಟಿ ಮಬ್ಬಾಗುತ್ತಿದ್ದರೆ,ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ತಪ್ಪದೇ ನೋಡಬೇಕು.
ಡಾಕ್ಟರ್ ಏನು ಮಾಡುತ್ತಾರೆ:-
★ ರೋಗಿ ಕೆಲಸದ ಒತ್ತಡದಿಂದ ಗಲಿಬಿಲಿಗೊಂಡಿದ್ದಾನೆ ಯೇ ಅಥವಾ ಭಾವೋದ್ರೇಕದ ಯಾವುದಾದರೂ ಒತ್ತಡಕ್ಕೊಳಗಾಗುತ್ತಿರುವನೇ, ಎಂಬ ವಿಷಯವನ್ನು ವಿಚಾರಿಸುತ್ತಾರೆ.ಹಾಗೆಯೇ ರೋಗಿಯ ಜೀವನಶೈಲಿ ಕುರಿತು ವಿವರಗಳನ್ನು ಸಂಗ್ರಹಿಸುವ ಮೂಲಕ,ತಕ್ಕ ಕಾರಣಗಳನ್ನು ಅನ್ವೇಷಿಸುತ್ತಾರೆ.
★ಮುತ್ತಾವುದಾದರೂ ತೀವ್ರ ರೋಗವಿರಬಹುದೆಂಬ ಅನುಮಾನಕ್ಕೆಡೆ ಮಾಡುವ ಸಂದರ್ಭದಲ್ಲಿ ಮತ್ತೆ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ.
★ ರೋಗಿಯ ಚಿಕಿತ್ಸೆಗಾಗಿ, ಸೈಕ್ಲಿಯಾಟ್ರಿಸ್ಟ್ ಶಿಫಾರಸನ್ನು ಮಾಡಬಹುದು.
ನಿವಾರಣೋಪಾಯಗಳು :-
★ ತಲೆನೋವು ಕಳವಳದಿಂದ ಅಥವಾ ಕೆಲಸದೊತ್ತಡದಿಂದ ಬರುತ್ತಿದ್ದರೆ, ಜೀವನ ವಿಧಾನದಲ್ಲಿ ಸ್ವಲ್ಪ ಮಟ್ಟಿನ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ, ಪದೇ ಪದೇ ಬರದಂತೆ ನೋಡಿಕೊಳ್ಳಬಹುದು.
★ಧಾರಾಳವಾಗಿ ತಾಜಾಗಾಳಿ ಪಡೆಯುವ ಮೂಲಕ,ವ್ಯಾಯಾಮ ಮಾಡುವ ಮೂಲಕ ಕೂಡಾ, ಈ ತಲೆನೋವು ಆಗಾಗ ಬರದಂತೆ ನೋಡಿಕೊಳ್ಳಬಹುದು.
ಪದೇ ಪದೇ ತಲೆನೋವು ಬರುತ್ತಿರುವಾಗ,ಅದು ಯಾವ ಕಾರಣದಿಂದ ಬರುತ್ತಿದೆಯೆಂಬ ಕಂಡುಹಿಡಿದು, ಈ ಕಾರಣಗಳಿಂದ ದೂರವಿರುವ ಮೂಲಕ, ಅದು ಬರದಂತೆ ನೋಡಿಕೊಳ್ಳಬಹುದು..
★ದೀರ್ಘ ಉಸಿರನ್ನು ಒಳಗೆಳೆದುಕೊಂಡು ಆಕಳಿಸಿ, ಇದು ರಿಲ್ಯಾಕ್ಸೇಷನ್ ಗೆ ಸಂಬಂಧಿಸಿದ ಒಂದು ವ್ಯಾಯಾಮ.
★ಎರಡು ಕೈಗಳ ಹಿಡಿಗಳನ್ನೂ ಗಟ್ಟಿಯಾಗಿ ಬಿಗಿದು ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಳ್ಳಬೇಕು.ಒಳಗೆಳೆದ ಸ್ವಲ್ಪ ಹೊತ್ತು ಹಾಗೆಯೇ ಹಿಡಿದಿಡಬೇಕು.
★ ಈಗ ಒಳಗಿರುವ ಗಾಳಿಯೆಲ್ಲವನ್ನೂ ನಿಧಾನವಾಗಿ ಹೊರಗೆ ಬಿಡಬೇಕು, ಇಡೀ ಶರೀರ ಈ ವೇಳೆಗೆ ಸಡಿಲವಾಗುತ್ತದೆ.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.