ಕಾರಣಗಳು :-
ಇಂದಿಗೂ ಈ ಕಾಯಿಲೆಗೆ ಈಡಾಗುವುದಾದರೂ ಏಕೆ ಎಂಬ ಪ್ರಶ್ನೆ ನಿಗೂಢವಾಗಿಯೇ ಇದೆ. ಆದರೆ ಕಾಯಿಲೆ ಬರಲು ಪ್ರೇರಣೆ ಕೊಡುವ ಅಂಶಗಳು ಹಾಗೂ ಗೊತ್ತಾಗ ಈ ಕಾಯಿಲೆಯಲ್ಲಿ ಮಿದುಳಿನಲ್ಲಾಗುವ ಬದಲಾವಣೆಗಳು ವೈದ್ಯರಿಗೂ ಸ್ಪಷ್ಟವಾಗಿ ಗೊತ್ತಾಗ ತೊಡಗಿದೆ. ಸ್ಕಿಜೋಫ್ರೀಯ ರೋಗಕ್ಕೆ ಕಾರಣಗಳನ್ನು ಹೀಗೆ ಸ್ಥೂಲವಾಗಿ ಹೇಳಬಹುದು.
ಅನುವಂಶಿಯತೆ :-
ಶೇಖಡ ಹತ್ತುರಷ್ಟು ರೋಗಿಗಳಲ್ಲಿ ಅವರ ಕುಟುಂಬದಲ್ಲಿ ಯಾರಾದರೂ ಇನ್ನೊಬ್ಬರಿಗೆ ಈ ಕಾಯಿಲೆ ಇದ್ದಿದ್ದು ಕಂಡುಬರುತ್ತದೆ ಹಲವು ಜೀನುಗಳ ಮುಖಾಂತರ, ಈ ಕಾಯಿಲೆ ಬರುವ ಸಂಭಾವ್ಯತೆ ವಂಶದಲ್ಲಿ ಒಬ್ಬರಿಗೆ ಕಾಯಿಲೆ ಇದ್ದರೆ ಅವರ ಮಕ್ಕಳಿಗೆ ಕಾಯಿಲೆ ಬರಲೇಬೇಕೆಂಬ ನಿಯಮವಿಲ್ಲ ಮುಂದಿನ ತಲೆಮಾರು ಅಥವಾ ಹಲವು ತಲೆಮಾರುಗಳ ನಂತರ ಕಾಯಿಲೆ ಕಾಣಿಸಿಕೊಳ್ಳಬಹುದು. ಆದರೂ ಸ್ಕಿಜೋಫ್ರೀನನಿಯ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ತಿಳಿಯಬೇಕಿಲ್ಲ.
ಪರಿಸರದ ಕಾರಣಗಳು :-
ಅತಿ ಜನಸಂದಣಿ, ವಿಪರೀತ ಆತಂಕ, ಒತ್ತಡದ ಜೀವನಶೈಲಿ,ಪರಿಸರಮಾಲಿನ್ಯ, ಪ್ರೀತಿವಿಶ್ವಾಸದ ಅಭಾವ,ಮೇಲಿಂದ ಮೇಲೆ ಒದಗುವ ಕಷ್ಟ, ನಷ್ಟ,ಸೋಲು ನಿರಾಶೆಗಳು,ನರಗಳ ಅವ್ಯವಸ್ಥಿತ ವಾಸಸ್ಥಳಗಳು ಮುಂತಾದವೆಲ್ಲ ಕಾಯಿಲೆ ಪ್ರಕಟವಾಗಲು ಅಥವಾ ಕಾಯಿಲೆ ದೀರ್ಘಕಾಲ ಉಳಿಯಲು ಪ್ರಮುಖ ಪಾತ್ರವಹಿಸುತ್ತವೆ ಎನ್ನಲಾಗುತ್ತದೆ.
ಮಿದುಳಿನಲ್ಲಾಗುವಬದಲಾವಣೆಗಳು :-
1. ನರ ಕೋಶಗಳ ನರವಾಹಕ ವ್ಯವಸ್ಥೆಯಲ್ಲಿ ಬದಲಾವಣೆಗಳು, ನಾರ್ ಎಪಿನೆಫ್ರಿನ್, ಡೋಪಮಿನ್, ಸೆರೋಟೋನಿನ್ಯಾಗಳಂತಹ ನರ ವಾಹಕ ವ್ಯವಸ್ಥೆಗಳು ಸ್ಕಿಜೋಪ್ರೀನಿಯ ರೋಗದಲ್ಲಿ ಸಹಜ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟವಾಗಿದೆ ಡೋಪಮಿನ್ ವ್ಯವಸ್ಥೆ ಸೂಕ್ಷ್ಮ ಸಂವೇದನೆಯಾಗಿ ಹೈಪರ್ ಸೆಂಸಿಟಿವ್ಕ ಕೆಲಸ ಮಾಡಿದರೆ, ಸೆರೋಟೊನಿನ್ ಪ್ರಮಾಣ ತಗ್ಗಿರುತ್ತದೆ.
2. ಮಿದುಳಿನೊಳಕ್ಕೆ ಬರುವ ಅಸಂಖ್ಯಾತ ಪ್ರಚೋದನೆಗಳನ್ನು ಪರಿಶೀಲಿಸಿ,ಯಾವುದು ಮುಖ್ಯಗ, ಯಾವುದು ಅಮುಖ್ಯ ಯಾವುದಕ್ಕೆ ಆದ್ಯತೆ ಮೇರೆಗೆ ಗಮನ ಕೊಡಬೇಕು ಎಂದು ವಿಂಗಡಿಸುವ ವ್ಯವಸ್ಥೆಗೆ ಸ್ಕಿಜೋಫ್ರೀನಿಯ ರೋಗದಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಒಂದು ವಾದವಿದೆ.
3. ದೀರ್ಘಕಾಲ ರೋಗದಿಂದ ಬಳಲುವ ರೋಗಿಗಳಲ್ಲಿ ಮೆದುಳಿನ ಕುಳಿಗಳು ದೊಡ್ಡವಾಗುತ್ತದೆ ಮಿದುಳಿನ ವಸ್ತು ಸವೆದಿರುತ್ತದೆ ಎಂಬುದು ಸಿಟಿ ಸ್ಕ್ಯಾನ್ ಎಂ.. ಆರ್ ಐ.ಚಿತ್ರಗಳಿಂದ ತಿಳಿದು ಬರುತ್ತದೆ.
4. ಈಗ ಲಭ್ಯವಿರುವ ಮಾಹಿತಿಯಿಂದ, ಸ್ಕಿಜೋಫ್ರೀನಿಯ ಮೆದುಳಿಗೆ ಸಂಬಂಧಿಸಿದ ಕಾಯಿಲೆ ಎಂಬುದು ಸ್ಪಷ್ಟವಾಗಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.