ಮನೆ ಸ್ಥಳೀಯ ಆಗಸ್ಟ್ 2 ರಿಂದ 8ರವರೆಗೆ ಜೆಎಸ್‌ಎಸ್‌ ಮೈಸೂರು ಅರ್ಬನ್ ಹಾತ್‌ ನಲ್ಲಿ ಹಸ್ತಶಿಲ್ಪ ಪ್ರದರ್ಶನ

ಆಗಸ್ಟ್ 2 ರಿಂದ 8ರವರೆಗೆ ಜೆಎಸ್‌ಎಸ್‌ ಮೈಸೂರು ಅರ್ಬನ್ ಹಾತ್‌ ನಲ್ಲಿ ಹಸ್ತಶಿಲ್ಪ ಪ್ರದರ್ಶನ

0

ಮೈಸೂರು: ಜೆಎಸ್‌ಎಸ್‌ ಮೈಸೂರು ಅರ್ಬನ್ ಹಾತ್‌ ನ ವತಿಯಿಂದ ಆಗಸ್ಟ್ 2 ರಿಂದ 8ರವರೆಗೆ ಗಾಂಧಿ ಶಿಲ್ಪ ಬಜಾ‌ರ್ ಹಸ್ತಶಿಲ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಜೆಎಸ್‌ಎಸ್‌ ಮಹಾವಿದ್ಯಾಪೀಠ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ  ತಿಳಿಸಿದರು.

Join Our Whatsapp Group

ಇಂದು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿದಂತೆ ಸುಮಾರು 50 ರಿಂದ 60 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಪ್ರದರ್ಶಿಸಲಿದ್ದಾರೆ.

ಜೆಎಸ್‌ಎಸ್‌ ಮೈಸೂರು ಅರ್ಬನ್ ಹಾತ್‌ ನ ಆವರಣದಲ್ಲಿ ಆ. 02 ರಂದು ಶುಕ್ರವಾರ ಸಂಜೆ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು,  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಟಿ. ದೇವೇಗೌಡ ಉದ್ಘಾಟನೆ ನೆರವೇರಿಸುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠದ ನಿರ್ದೇಶಕ  ಪ್ರೊ ಮೊರಬದ ಮಲ್ಲಿಕಾರ್ಜುನ ಕರಕುಶಲ ಸೇವಾ ಕೇಂದ್ರ ಸಹಾಯಕ ಕೆ.ಎಸ್. ಸುನಿಲ್‌ ಕುಮಾರ್, ಸಂಯೋಜಕರು ರಾಕೇಶ್ ರೈ ಎ ಭಾಗಿಯಾಗಿದ್ದರು.