ಮನೆ ಜ್ಯೋತಿಷ್ಯ ಉದಾಹರಣೆ ಜಾತಕ

ಉದಾಹರಣೆ ಜಾತಕ

0

    ಈ ಜಾತಕರು,ಓರ್ವ ವೈದ್ಯರು. ಅಮೆರಿಕದಲ್ಲಿ ಎಂ ಎಸ್ ಮಾಡಿ ಅಲ್ಲಿಯ ಮಿಸಿಸಿಪ್ಪಿ ರಾಜ್ಯದಲ್ಲಿ ವೈದ್ಯರಾಗಿ ವೃತ್ತಿಯಲ್ಲಿದ್ದಾರೆ. 2011ರಲ್ಲಿ ಕಣ್ಣಿನ ದೋಷ ಹೆಚ್ಚು ಕಾಣಿಸಿಕೊಂಡು ಅಲ್ಲಿಯ ಕಣ್ಣಿನ ತಜ್ಞರಲ್ಲಿ ತೋರಿಸಿದರು ಸಹ ಅಸಮಾಧಾನವಾಗದೆ, ಅವರ ತಂದೆ ನನ್ನಲ್ಲಿ ಬಂದು ಅವರ ಜಾತಕ ತೋರಿಸಿ, ಪರಿಹಾರ ಕೇಳಿದರು. ಜಾತಕರಿಗೆ 21- 4 – 2018 ಕಣ್ಣಿನ ತೊಂದರೆ( ಕಣ್ಣು ಮುಂಜು ಆಗುವುದು, ಕಣ್ಣುನೋವು, ನೀರು ಸುರಿಯುವುದು. )ಇತ್ತು. ಆದರೆ ಈಗ ಹೆಚ್ಚಾಗಿದೆ.ಅದರಲ್ಲೂ ಎಡಗಣ್ಣಿಗೆ ಹೆಚ್ಚು ತೊಂದರೆ.

Join Our Whatsapp Group

   ಜಾತಕದಲ್ಲಿ ಶುಕ್ರ ತನ್ನ  ದಶೆಯ ಎರಡನೇ ಭಾಗದ ಹತ್ತು ವರ್ಷ ಕೇಂದ್ರಾಧಿಪತಿಯಾಗಿ 21ನೇ ಏಪ್ರಿಲ್   2003ರಿಂದ ತೊಂದರೆ ಕೊಡುತ್ತಿದ್ದಾನೆ.ಶುಕ್ರ ಸ್ಥಿತರಾಶಿ ಮಿನಕ್ಕೆ, ಮತ್ತು ರಾಹು ದೃಷ್ಟಿ ಇರುವುದರಿಂದ ಮೀನರಾಶಿಯಂತೆ ಪೇರಿಕ್ ಪಾಸ್ಫೇಟ್ ಲವಣ ಕೊರತೆಯಿಂದ ರಕ್ತಹೀನತೆಯಾಗಿ, ಆಮ್ಲಜನಕವೂ ಸಹ ಕೊರತೆಯಾಗಿದೆ. ರಕ್ತವು ಮಿದುಳಿನ ಸಂಚರಿಸುತ್ತಾ ಅದರ ಎಲ್ಲಾ ಅಂಗದ ನರಗಳಿಗೂ ಶುದ್ಧವಾದ ಆಮ್ಲಜನಕ ನೀಡಿ ಶುದ್ಧಿ ಮಾಡುತ್ತದೆ. ಆದರೆ ರಕ್ತ ಹೀನತೆಯಿಂದ ಆಮ್ಲಜನಕ ಕೊರತೆಯಾಗಿ,ಕಾರಣಾಂತರದಿಂದ ಮೆದುಳಿನ ಕಣ್ಣಿನ ನಿಯಂತ್ರಣ ಕೊಠಡಿಯಲ್ಲಿ ಆಮ್ಲಜನಕ ಕೊರತೆಯಾಗಿ,ಅಲ್ಲಿಯ ಜೀವಕೋಶಗಳು ಶುಷ್ಕವಾಗದೆ ಕಣ್ಣು ದೋಷವಾಗುತ್ತಾ ಬಂದಿದೆ. ನಾನು ಮೊದಲು ಇವರಿಗೆ ರಕ್ತದಲ್ಲಿ ಕಬ್ಬಿಣಾಂಶ ಕೊರತೆಯಿಂದೆ ಎಂದು ತಿಳಿಸಿ ಕಬ್ಬಿಣಾಂಶ ಹೆಚ್ಚು ಇರುವ ಆಹಾರ ತೆಗೆದುಕೊಳ್ಳಲು ತಿಳಿಸಿದೆ ಮತ್ತು ಕಬ್ಬಿನಾಂಶಕಾರಕಗ್ರಹ ಶನಿಗೆ ಪರಿಹಾರವಾಗಿ ಎಳ್ಳು ದಾನ ಮಾಡಲು ತಿಳಿಸಿದೆ.ಅನಂತರ ಎಡಗಣ್ಣು ಕಾರಕ ಮತ್ತು ‘ಬಿ’ ವಿಟಮಿನ್ ಕಾರಕ ಚಂದ್ರನಿಗೆ ಅಕ್ಕಿ ರಾಹುವಿಗೆ ಉದ್ದು ದಾನ ಮಾಡಲು ತಿಳಿಸಿದೆ.

   ಅವರ ತಂದೆಯು ಮಗನಿಗೆ ದೂರವಾಣಿ ಮೂಲಕ ತಿಳಿಸಿದರು. ಆದರೆ ಅವರು ನಂಬಲೇ ಇಲ್ಲ ಕಾರಣ, ನಾನು ವೈದ್ಯನಾಗಿ ಕಬ್ಬಿಣಾಂಶದ ಕೊರತೆಯಿಲ್ಲ ಎಂದು ವಾದಮಾಡಿದರು. ಆದರೆ ಅವರಿಗೆ ಕಣ್ಣಿನ ತೊಂದರೆ ಬಗ್ಗೆ ಕೇಳಿದರು. ನಾನುರಕ್ತಹೀನತೆ, ಆಮ್ಲಜನಕ ಕೊರತೆ ಉಂಟಾಗಿ ಅದು ಮಿದುಳಿನ ಮೇಲೆ ಪರಿಣಾಮ, ಬೀರಿ, ನಿಮಗೆ ನಿದ್ರಾಭಂಗ, ತಲೆನೋವು, ಅದೇ ರೀತಿಯಲ್ಲಿ ನಿದ್ರಾ ಭಂಗವಾದರೆ ಕಣ್ಣಿನತೊಂದರೆ, ನೋವು ಬರುತ್ತದೆಂದು ತಿಳಿಸಿದೆ. ಅದರ ನಂತರ ಅವರು ರಕ್ತಪರಿಕ್ಷೆಯನ್ನು ತಮ್ಮ ಆಸ್ವತ್ರೆಯಲ್ಲಿ ಮಾಡಿಸಿದಾಗ ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆ ಇತ್ತು. ಇದರಿಂದ ಅವರಿಗೆ ಆಶ್ಚರ್ಯ! ನಿಮಗೆಜ್ಯೋತಿಷ್ಯಶಾಸ್ತ್ರದ ರೀತಿಯಲ್ಲಿ ಹೇಗೆ ತಿಳಿಯುತ್ತದೆ? ವೈದನಾಗಿ ನನಗೇ ತಿಳಿದಿಲ್ಲ. ನೀವು ಭಾರತದಲ್ಲಿ ನನ್ನ ಜಾತಕ ನೋಡಿ ನನ್ನ ಆರೋಗ್ಯದ ಬಗ್ಗೆ ಪ್ರಯೋಗಾಲಯದಂತೆ ಹೇಳುತ್ತೀರಿ! ಅಮೇರಿಕಾದ ಪ್ರಖ್ಯಾತ ಕಣ್ಣಿನ ವೈದರು ನನ್ನ ರಕ್ತ ಮತ್ತು ಅದರ ನ್ಯೂನತೆಯಿಂದ ಕಣ್ಣಿನ ವ್ಯಾಧಿ ಬರುವುದರ ಬಗ್ಗೆ ತಿಳಿಸಲಿಲ್ಲವೆಂದುರು. ಈಗ ಅದಕ್ಕೆ ಪರಿಹಾರವಾಗಿ ಕಬ್ಬಿಣಾಂಶದ ಔಷಧಗಳನ್ನು ಉಪಯೋಗಿಸಿದ ಮೇಲೆ ಕಣ್ಣಿನತೊಂದರೆ ಕಡಿಮೆಯಾಗಿದೆ.

 ಅವರಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಅದರ ಪರಿಹಾರಗಳ ಬಗ್ಗೆ ಅಪರಾವಾದ ಗೌರವ ಹೊಂದಿ, ಅನೇಕ ಅವರ ಸಮಸ್ಯೆಗಳನ್ನು ಇಂದಿಗೂ ಜ್ಯೋತಿಷ್ಯದ ಮುಖಾಂತರ ಪರಿಹರಿಸಿಕೊಳ್ಳುತ್ತಾರೆ.

 ಕಣ್ಣುಗಳಿಗೆ – ಲಗ್ನ ಬಲಗಣ್ಣಿಗೆ- ಸೂರ್ಯ,ಎಡಗಣ್ಣಿಗೆ – ಚಂದ್ರಕಾರಕರು. ಲಗ್ನದಿಂದ 2ನೇ ಮತ್ತು 12ನೇ ಭಾವಕಾರರು.