ಮನೆ ದೇವಸ್ಥಾನ ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ

ಶ್ರೀ ಮುತ್ತರಾಯ ಸ್ವಾಮಿ ದೇವಸ್ಥಾನ

0

    ಈ ಪುಣ್ಯಕ್ಷೇತ್ರವು ಕದಂಬ ಕ್ಷೇತ್ರವಾಗಿದೆ ವ್ಯಾಸರಾಯರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಪ್ರಾಣದೇವರು.ಮುತ್ತ ರಾಯ ಸ್ವಾಮಿ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ.ಕ್ಷೇತ್ರದಲ್ಲಿ ವೈಷ್ಣವಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆಯುತ್ತದೆ.

Join Our Whatsapp Group

     ಪ್ರತಿವರ್ಷ ಮಾಘ ಮಾಸದಲ್ಲಿ ಜಾತ್ರಾ ಮಹೋತ್ಸವ, ಶ್ರೀ ರಾಮನವಮಿ, ಹನುಮ ಜಯಂತಿ, ಹೀಗೆ ವಿಶೇಷ ಪೂಜೆಗಳು ನಡೆಯುತ್ತದೆ.

      ಶ್ರಾವಣ ಮಾಸದಲ್ಲಿ ಅನ್ನದಾಸೋಹ ಕೂಡ ನಡೆಯುತ್ತದೆ.ಭಕ್ತಾದಿಗಳು ಇಲ್ಲಿ 12 ದಿವಸ 24 ದಿವಸ ಅಥವಾ 48 ದಿವಸಗಳ ಮಂಡಳಸೇವೆ ಎಂದು ಭಗವಂತನ ಸೇವೆ ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳುತ್ತಾರೆ.ಮತ್ತು ಗ್ರಹ ದೋಷ ಆರೋಗ್ಯ ಸಮಸ್ಯೆಯಿಂದ ಬಳಲುವರು ಇಲ್ಲಿ ಸೇವೆ ಸಲಿಸುತ್ತಾರೆ.ದೇವಾಲಯದ ಸುತ್ತ ಪ್ರದಕ್ಷಿಣೆ ಮತ್ತು ಉರುಳು ಸೇವೆಯ ಮುಖಾಂತರ ಸೇವೆ ಸಲ್ಲಿಸುತ್ತಾರೆ 2014ರಲ್ಲಿ ಊರಿನ ಎಂ.ಎಲ್.ಎ ಶ್ರೀಯುತ ರಾಮಕೃಷ್ಣ ಮತ್ತು ನಾಗೇಂದ್ರ ಇವರುಗಳು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ  ಬಹಳ ಸಹಾಯ ಮಾಡಿದ್ದಾರೆ.

     ಭಕ್ತಾದಿಗಳು ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ.ಮತ್ತೊಂದು ವಿಶೇಷವೇನೆಂದರೆ ಪಂಚಮುಖಿ ಗಣೇಶನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ.ಮತ್ತು ಸಮುದಾಯ ಭವನವಿದೆ ಹಿಂದಿನ ಕಾಲದಿಂದಲೂ ಇಲ್ಲಿ ಬಂದು ಮದುವೆಗಳನ್ನು ಮಾಡುತ್ತಿದ್ದಾರೆ.

     ದೇವಸ್ಥಾನದ ಮುಂಭಾಗದಲ್ಲಿ ಕೋಳಿ ರಾಯರ ಬೆಟ್ಟವಿದೆ ಹಿಂದೆ ಪಾಳೇಗಾರರು ನಿವಾಸ ಮಾಡುತ್ತಿದ್ದರೆಂಬುದಕ್ಕೆ  ಅಲ್ಲಿರುವ ಮಂಟಪದಲ್ಲಿ ಗೃಹ ಕುರುಹುಗಳಿವೆ ಮತ್ತು ಈ ಕ್ಷೇತ್ರದಲ್ಲಿ ಒಂದು ಕಲ್ಯಾಣ ಇದೆ ಬೇಸಿಗೆಯಲ್ಲೂ ಕೂಡಾ ಕಲ್ಯಾಣಿಯಲ್ಲಿ ನೀರು ಸಮೃದ್ಧಿಯಾಗಿರುತ್ತದೆ.

      ಬೆಟ್ಟದ ಅಮ್ಮ ತಾಯಿಯ ದೇವಸ್ಥಾನವಿದೆ ಹಿಂದೆ ಋಷಿಮುನಿಗಳು ಈ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದ ಪ್ರತೀತಿ ಇದೆ.