ಮನೆ ರಾಜ್ಯ ಚಿರತೆ ದಾಳಿ: ಹೋರಾಡಿ ಪ್ರಾಣ ಉಳಿಸಿಕೊಂಡ ರೈತ

ಚಿರತೆ ದಾಳಿ: ಹೋರಾಡಿ ಪ್ರಾಣ ಉಳಿಸಿಕೊಂಡ ರೈತ

0
ಸಾಂದರ್ಭಿಕ ಚಿತ್ರ

ಮಂಡ್ಯ(Mandya):  ಮದ್ದೂರು ತಾಲೂಕಿನ ಹೆಚ್. ಹೊಸೂರು ಗ್ರಾಮದ ರೈತನೋರ್ವ  ಬೈಕ್ ನಲ್ಲಿ ಕಬ್ಬಿನ ಗದ್ಧೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ.

ಈ ವೇಳೆ ರೈತ ಚಿರತೆಯೊಂದಿಗೆ 15 ನಿಮಿಷ ಹೋರಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ರೈತ ಜಗದೀಶ್ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸಹಳ್ಳಿ, ಕೆಂಬೂತನಗೆರೆಯಲ್ಲಿ  ಕಳೆದ ಮೂರು ದಿನಗಳಿಂದ ಚಿರತೆ ದಾಳಿ ಮಾಡುತ್ತಿದ್ದು, ಎರಡು ಮೇಕೆಗಳನ್ನು ಚಿರತೆ ಹೊತ್ತೊಯ್ದಿದೆ. ಆದರೆ ಈ ಬಗ್ಗೆ  ವಿಷಯ ತಿಳಿಸಿದರೂ  ಸಹ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದು,  ಬೋನ್ ಇರಿಸಿ ಚಿರತೆ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.