ಮನೆ ರಾಜಕೀಯ ಕೈ ತಪ್ಪಿದ ರಾಜ್ಯಸಭಾ ಟಿಕೇಟ್: ಶೀಘ್ರದಲ್ಲೇ ಮುಂದಿನ ನಡೆ ತೀರ್ಮಾನ- ಮುದ್ದ ಹನುಮೇಗೌಡ

ಕೈ ತಪ್ಪಿದ ರಾಜ್ಯಸಭಾ ಟಿಕೇಟ್: ಶೀಘ್ರದಲ್ಲೇ ಮುಂದಿನ ನಡೆ ತೀರ್ಮಾನ- ಮುದ್ದ ಹನುಮೇಗೌಡ

0

ತುಮಕೂರು(Tumkur):   ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಮಾಜಿ ಸಂಸದ ಮುದ್ದಹನುಮೇಗೌಡ, ತಮ್ಮ ಮುಂದಿನ ನಡೆ ಬಗ್ಗೆ ಶೀಘ್ರವೇ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮುದ್ದಹನುಮೇಗೌಡ, ನನಗೆ ರಾಜ್ಯಸಭಾ ಟಿಕಟ್ ನೀಡುವ ಭರವಸೆ ನೀಡಿದ್ದರು. ಆದರೆ ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ.  ಸೌಜನ್ಯಕ್ಕಾದ್ರೂ ನನ್ನ ಜತೆ ಮಾತನಾಡಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ನನ್ನ ಮುಂದಿನ ತೀರ್ಮಾನ ತಿಳಿಸುತ್ತೇನೆ. ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಮಾಡುತ್ತೇನೆ. ಕುಣಿಗಲ್ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ.  ಯಾವ ಪಕ್ಷದಿಂದ ಸ್ಪರ್ಧೆ ಅಂತಾ ಶೀಘ್ರದಲ್ಲೇ ಹೇಳುವೆ ಎಂದು ತಿಳಿಸಿದರು.