ಮನೆ ಅಪರಾಧ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ

ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ

0

ಕೊಟ್ಟೂರು (ವಿಜಯನಗರ ಜಿಲ್ಲೆ): ಪತ್ನಿಗೆ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಆಕೆಯ ಪತಿ ಹಾಗೂ ಕುಟುಂಬಸ್ಥರು ಸೇರಿಕೊಂಡು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಯಶೋದ ಮೃತ ದುರ್ದೈವಿ.

ಹನ್ನೊಂದು ವರ್ಷಗಳ ಹಿಂದೆ ಪಟ್ಟಣದ ಕೆ. ಆನಂದ ಎಂಬುವರ ಜೊತೆಗೆ ವಿವಾಹವಾಗಿದ್ದರು.

ಮಕ್ಕಳಾಗದ ಕಾರಣ ಗಂಡ ಹಾಗೂ ಅವರ ಮನೆಯವರು ಯಶೋದ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಬುಧವಾರ ಆನಂದ ಹಾಗೂ ಮನೆಯವರು ಯಶೋದ ಅವರ ಬಾಯಿಗೆ ಬಟ್ಟೆ ಕಟ್ಟಿ, ಕಲ್ಲಿನಿಂದ ಮುಖ ಹಾಗೂ ತಲೆಗೆ ಜಜ್ಜಿ ಹೊಡೆದು ಸಾಯಿಸಿದ್ದಾರೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಯಶೋದ ಅವರ ಸಹೋದರ ಸಂಶಯಗೊಂಡು ಮನೆಯ ಬಾಗಿಲು ಮುರಿದು ಒಳಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರ ಸಹೋದರ ನೀಡಿರುವ ದೂರಿನ ಅನ್ವಯ ಆನಂದ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ಸೋಮಶೇಖರ್‌ ಕೆಂಚರೆಡ್ಡಿ ತಿಳಿಸಿದರು.

ಹಿಂದಿನ ಲೇಖನಅಂತರ ಜಿಲ್ಲಾ ಬಂದೋಬಸ್ತ್’ಗೆ ನೇಮಿಸಬೇಡಿ: ಪೊಲೀಸರ ಮನವಿ
ಮುಂದಿನ ಲೇಖನಸಿದ್ದಿ ಸಹೋದರಿಯರ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ