ಮನೆ ರಾಜ್ಯ ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವು

ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವು

0

ಬೆಂಗಳೂರು: ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

Join Our Whatsapp Group

ಪ್ರಭುರಾಮ್​ ಪ್ರಸಾದ್​(33) ಮೃತ ವ್ಯಕ್ತಿ.

ಅನಿಲ್ ಕಪಾಳಕ್ಕೆ ಹೊಡೆದ ವ್ಯಕ್ತಿ. ಮೃತ ಪ್ರಭುರಾಮ್ ನಿನ್ನೆ ಮಗನ ಜೊತೆ ಹಬ್ಬಕ್ಕೆಂದು ಬೈಕ್​​ ನಲ್ಲಿ ದೇಗುಲದ ಬಳಿ ಹೋಗಿದ್ದ. ದಾರಿ ಮಧ್ಯೆ ಬೈಕ್ ​ನಲ್ಲಿ ಸೌಂಡ್ ಬರ್ತಿದೆ ಅಂತಾ ಬೈಕ್​ ನ್ನು​ ಸೈಡ್​ ಹಾಕಿ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್​ ಗೆ​ ಟಚ್ ಮಾಡಿದ್ದಾರೆ.​

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆ ಬಳಿ ಬಾ ಎಂದು ಮಹಿಳೆ ಹೊರಟು ಹೋಗಿದ್ದಾರೆ. ಮನೆ ಬಳಿ ಹೋದಾಗ ಮಹಿಳೆ ಪತಿ ಅನಿಲ್ ಜತೆ ಪ್ರಭುರಾಮ್ ಜಗಳವಾಗಿದೆ. ಈ ವೇಳೆ ಪ್ರಭುರಾಮ್​ ಕೆನ್ನೆಗೆ 4-5 ಬಾರಿ ಅನಿಲ್ ಹೊಡೆದಿದ್ದಾರೆ.​

ಜಗಳದ ಬಳಿಕ ಮನೆಗೆ ಹೋಗಿ ನೋವಿನಲ್ಲೇ ಮಲಗಿದ್ದ ಪ್ರಭುರಾಮ್, ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಹಿಂದಿನ ಲೇಖನಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ
ಮುಂದಿನ ಲೇಖನಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಾವು