ಮನೆ ಸುದ್ದಿ ಜಾಲ ವಿಧಾನಪರಿಷತ್ ಚುನಾವಣೆ: ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಬಿರುಸಿನ ಪ್ರಚಾರ

ವಿಧಾನಪರಿಷತ್ ಚುನಾವಣೆ: ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಬಿರುಸಿನ ಪ್ರಚಾರ

0

ಹುಣಸೂರು (Hunsuru)- ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೈ.ವಿ.ರವಿಶಂಕರ್ ಪರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಿರುಸಿನ ಪ್ರಚಾರ ನಡೆಸಿದರು.

ಪಟ್ಟಣದ ನಾನಾ ಭಾಗಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಸಚಿವರು, ರವಿಶಂಕರ್ ಅವರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ವಿಧಾನಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಬೇಕೆಂದು ಪದವೀಧರರು, ವಕೀಲರು, ಶಿಕ್ಷಕರು, ಗಣ್ಯರು, ಮುಖಂಡರಲ್ಲಿ ಮನವಿ ಮಾಡಿದರು.

ರವಿಶಂಕರ್ ಅವರು ಉತ್ತಮ ಸಂಘಟಕರು. ಸಮಾಜದ ಕಟ್ಟಕಡೆಯ, ವಿವಿಧ ಸ್ತರದ ವ್ಯಕ್ತಿಯೊಂದಿಗೆ ಜ್ಯಾತ್ಯಾತೀತವಾಗಿ ಬೆರೆತು ಕಷ್ಟಸುಖಗಳನ್ನು ಆಲಿಸುವ ವ್ಯಕ್ತಿ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತರೂ, ಸತತ ಆರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡು ಅವರ ಸಮಸ್ಯೆಗಳನ್ನು ಆಲಿಸುತ್ತಾ ಬಂದಿದ್ದಾರೆ ಎಂದರು.

ಸರ್ಕಾರದ ಕಾರ್ಯಕ್ರಮವನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ರವಿಶಂಕರ್ ಮಾಡುತ್ತಾ ಬಂದಿದ್ದಾರೆ. ಸಚಿವರು, ಸಂಸದರು ಸೇರಿದಂತೆ ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಧನಿ ಎತ್ತುವ ಗುಣ ಅವರಿಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದ್ದು, ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವ ಪ್ರಮಾಣಿಕ‌ ಪ್ರಯತ್ನವನ್ನು ರವಿಶಂಕರ್ ಮಾಡಲಿದ್ದಾರೆ. ಹೀಗಾಗಿ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

ಇದೇ ವೇಳೆ ಪದವೀಧರರು ವಿವಿಧ ಸಮಸ್ಯೆಗಳನ್ನು ಸಚಿವರ ಸಚಿವರ ಗಮನಕ್ಕೆ ತಂದು ಮನವಿ ಪತ್ರ ನೀಡಿದರು.

ಹಿಂದಿನ ಲೇಖನಪರಾರಿಗೆ ಯತ್ನಿಸಿದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ: ಕಾಲಿಗೆ ಗುಂಡಿಟ್ಟ ಪೊಲೀಸರು
ಮುಂದಿನ ಲೇಖನಮಹಿಂದಾ ರಾಜಪಕ್ಸ ಬಂಧನ ಕೋರಿ ಕೋರ್ಟ್‌ ಅರ್ಜಿ