ಮನೆ ಅಪರಾಧ ಅಪಾರ ಸಾಲ ಮಾಡಿಕೊಂಡಿದ್ದ ಯುವಕ ಆತ್ಮಹತ್ಯೆ

ಅಪಾರ ಸಾಲ ಮಾಡಿಕೊಂಡಿದ್ದ ಯುವಕ ಆತ್ಮಹತ್ಯೆ

0

ಹುಣಸೂರು: ಅಪಾರ ಸಾಲ ಮಾಡಿಕೊಂಡಿದ್ದ ಯುವಕನೊರ್ವ ಸಾಲ ತೀರಿಸಲಾಗದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ.

ತಾಲೂಕಿನ ಬನ್ನಿಕುಪ್ಪೆ ನಿವಾಸಿ ಸಣ್ಣಮೊಗಯ್ಯರ ಪುತ್ರ ಚೇತನ್ (30) ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಇವರಿಗೆ ತಂದೆ-ತಾಯಿ, ಸಹೋದರ ಇದ್ದಾರೆ.

ಚೇತನ್ ತಮ್ಮ ಜನೀನಿನಲ್ಲಿ ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೃಷಿಗಾಗಿ ಎಚ್.ಡಿ.ಎಫ್.ಸಿ., ಆಕ್ಸಿಸ್, ಇಕ್ವಿಟಾಸ್ ಬ್ಯಾಂಕ್’ಗಳಲ್ಲಿ 7 ಲಕ್ಷ ಹಾಗೂ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು.

ಎರಡು ವರ್ಷಗಳಿಂದ ನಿರೀಕ್ಷೆಯಂತೆ ಬೆಳೆ ಕೈ ಹತ್ತದೆ, ಸೂಕ್ತ ದರವೂ ಸಿಗದೆ ಸಾಲ ತೀರಿಸಲಾಗದೆ ಕಂಗಾಲಾಗಿದ್ದು, ಈ ಬಗ್ಗೆ ಮನೆಯವರ ಬಳಿ ಆಗಾಗ್ಗೆ ಹೇಳಿಕೊಳ್ಳುತ್ತಿದ್ದರು.

ಫೆ. 15 ರಂದು ಬುಧವಾರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದಾತನ ಬೈಕ್ ಗ್ರಾಮಕ್ಕೆ ಸಮೀಪದ ಕೆಂಚನಕೆರೆ ಏರಿ ಮೇಲೆ ಶುಕ್ರವಾರ ಪತ್ತೆಯಾಗಿತ್ತು. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಶವಕ್ಕಾಗಿ ಶೋಧ ನಡೆಸಿದ ವೇಳೆ ಮದ್ಯಾಹ್ನ ಕೆರೆಯಲ್ಲಿ ಶವ ಪತ್ತೆಯಾಗಿದೆ.

ಈ ಬಗ್ಗೆ ಮೃತನ ತಾಯಿ ವಸಂತ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಹಿಂದಿನ ಲೇಖನಮೈಸೂರಿನ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ: ವಿಶೇಷ ಪೂಜೆ
ಮುಂದಿನ ಲೇಖನಬಾಲಕಿ ಮೇಲೆ ಅತ್ಯಾಚಾರ: 67 ವರ್ಷದ ವೃದ್ದನಿಗೆ 20 ವರ್ಷ ಕಠಿಣ ಸಜೆ