ಮನೆ ಅಪರಾಧ ಸಬ್ಸಿಡಿ ಬಿಡುಗಡೆಗೆ ಲಂಚ ಬೇಡಿಕೆ: ಜಂಟಿ ನಿರ್ದೇಶಕ, ಉಪನಿರ್ದೇಶಕಿ ಎಸಿಬಿ ಬಲೆಗೆ

ಸಬ್ಸಿಡಿ ಬಿಡುಗಡೆಗೆ ಲಂಚ ಬೇಡಿಕೆ: ಜಂಟಿ ನಿರ್ದೇಶಕ, ಉಪನಿರ್ದೇಶಕಿ ಎಸಿಬಿ ಬಲೆಗೆ

0

ಮೈಸೂರು: ಸರ್ಕಾರದ 25 ಲಕ್ಷ ರೂ. ಸಬ್ಸಿಡಿ ಬಿಡುಗಡೆ ಮಾಡಲು ಉದ್ಯಮಿಯಿಂದ 1.50 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಕಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಮೈಸೂರು ತಾಲೂಕಿನ ಕೈಗಾರಿಕಾ ಪ್ರದೇಶದ ನಿವಾಸಿಯೊಬ್ಬರು ಸಣ್ಣ ಪ್ರಮಾಣದ ಕೈಗಾರಿಕೆ ಸ್ಥಾಪಿಸಲು 2 ಕೋಟಿ ರೂ. ಸಾಲವನ್ನು 2019 ರಲ್ಲಿ ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್​ನಿಂದ ಪಡೆದಿದ್ದರು‌. ನಂತರ ಸಣ್ಣ ಕೈಗಾರಿಕಾ ಕಂಪನಿಯನ್ನ ಪ್ರಾರಂಭಿಸಿದ್ದರು.

ಇವರು ಪಡೆದ ಸಾಲಕ್ಕೆ ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮಂಜೂರಾಗಿತ್ತು. ಆದರೆ, ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಲು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ.‌ಲಿಂಗರಾಜು ಹಾಗೂ ಉಪನಿರ್ದೇಶಕಿ ಎಲ್ ಮೇಘಲಾ ಅವರು ಉದ್ಯಮಿ ಬಳಿ 1.50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು.

ಉದ್ಯಮಿಗೆ ಒತ್ತಡ ಹೇರಿ ಮುಂಗಡವಾಗಿ 25 ಸಾವಿರ ರೂ. ಪಡೆದಿದ್ದರು. ನಂತರ ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಉದ್ಯಮಿ, ಎಸಿಬಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಎಸಿಬಿ ಹಾಗೂ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ.ಕೆ.ಲಿಂಗರಾಜು ಕಚೇರಿಯಲ್ಲಿ 1.35 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರು ಅಧಿಕಾರಿಗಳನ್ನ ರೆಡ್ ಹ್ಯಾಡ್ ಆಗಿ ಹಿಡಿದು ಬಂಧಿಸಿದ್ದಾರೆ.

ಹಿಂದಿನ ಲೇಖನವಾಣಿಜ್ಯ ಬಳಕೆಯ ಸಿಲಿಂಡರ್ ದರ 91.50 ರೂ.ಕಡಿತ
ಮುಂದಿನ ಲೇಖನಕೇಂದ್ರ ಬಜೆಟ್ 2022: ಇಂದಿನ ಬಜೆಟ್ ಭಾರತದ ಮುಂದಿನ 25 ವರ್ಷಗಳಿಗೆ ಮಾರ್ಗದರ್ಶಿ; ವಿತ್ತ ಸಚಿವೆ ಸೀತಾರಾಮನ್