ಮನೆ ಮನರಂಜನೆ ಚೇತರಿಸಿಕೊಂಡ ಬಳಿಕ ಸಿನಿಮಾದಲ್ಲಿ ಬ್ಯುಸಿಯಾದ ನಟ ದಿಗಂತ್‌

ಚೇತರಿಸಿಕೊಂಡ ಬಳಿಕ ಸಿನಿಮಾದಲ್ಲಿ ಬ್ಯುಸಿಯಾದ ನಟ ದಿಗಂತ್‌

0

ಬೆಂಗಳೂರು (Bengaluru): ಗೋವಾದಲ್ಲಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡು ಸ್ವಲ್ಪ ದಿನ ರೆಸ್ಟ್‌ ನಲ್ಲಿದ್ದ ನಟ ದಿಗಂತ್‌ ಅವರು ಇದೀಗ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಗೋವಾ ಪ್ರವಾಸದಲ್ಲಿದ್ದ ವೇಳೆ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ದಿಗಂತ್‌ ಅವರನ್ನು ಏರ್ ಲಿಫ್ಟ್ ಮಾಡುವ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ದಿಗಂತ್‌ ಗುಣಮುಖರಾಗಲು ಹೆಚ್ಚು ಸಮಯ ಬೇಕಾಗುತ್ತದೆ ಎನ್ನಲಾಗಿತ್ತು.

ಆದರೆ ಬಹುಬೇಗನೇ ಚೇತರಿಸಿಕೊಂಡಿರುವ ದಿಗಂತ್‌ ಅವರು ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾದ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಲ್ಲದೇ ಶೂಟಿಂಗ್‌ನಲ್ಲಿ ಭಾಗಿ ಆಗಲು ಮುಂದಾಗಿದ್ದಾರೆ.

ನಟ ದಿಗಂತ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದರ ಜೊತೆಗೆ ದಿಗಂತ್ ಹೊಸ ಸಿನಿಮಾಗಳು ಕೂಡ ಪ್ರಕಟ ಆಗಿವೆ. ದಿಗಂತ್‌ಗೆ ಹೊಸ ಸಿನಿಮಾದ ಆಫರ್ ಅರಸಿ ಬಂದಿದೆ. ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ದಿಗಂತ್. ವಿಶೇಷವೆಂದರೆ ದಿಗಂತ್ ಜೊತೆಗೆ ರಿಷಬ್ ಶೆಟ್ಟಿ ಸಹ ಅದೇ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಎನ್ನುವ ಸಿನಿಮಾ ಕೂಡ ಒಪ್ಪಿಕೊಂಡಿದ್ದಾರೆ.

ಈಗಾಗಲೇ ಸಿನಿಮಾ ಫೈನಲ್ ಆಗಿದೆ. ಇನ್ನೇನು ಸಿನಿಮಾದ ಶೂಟಿಂಗ್ ಕೂಡ ಶುರುವಾಗಲಿದೆ. ನಟ ದಿಗಂತ್ ಚಿತ್ರತಂಡವನ್ನು ಭೇಟಿ ಮಾಡಿದ್ದಾರೆ. ಚಿತ್ರೀಕರಣಕ್ಕಾಗಿ ದಿನಾಂಕವನ್ನು ಕೂಡ ನಿಗಧಿ ಮಾಡಲಾಗಿದೆ. ಆಗಸ್ಟ್‌ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದ್ದು, ನಟ ದಿಗಂತ್ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

ತಾವು ಗುಣಮುಖರಾದ ಬಳಿಕ ದಿಗಂತ್ ವಿಡಿಯೋ ಮಾಡುವ ಮೂಲಕ, ತಾವು ಗುಣಮುಖರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ದಿಗಂತ್ ಗುಣಮುಖರಾಗಲೆಂದು ಪ್ರಾರ್ಥಿಸಿದ ಪ್ರತಿ ಅಭಿಮಾನಿಗಳಿಗೂ ಧನ್ಯವಾದ ಹೇಳಿದ್ದರು.

ಹಿಂದಿನ ಲೇಖನಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಹತ್ಯೆ
ಮುಂದಿನ ಲೇಖನಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್‌ ನಲ್ಲಿ ಸಾಗಿತು ಬಾಲಕಿಯ ಹೃದಯ: ಅಂಗಾಂಗ ದಾನದಿಂದ ನಾಲ್ಕು ಮಂದಿಯ ಜೀವನಕ್ಕೆ ಬೆಳಕು