ಮನೆ ಪ್ರವಾಸ ದೆಹಲಿಯಲ್ಲಿರುವ ಪುರಾತನ ಕೋಟೆಗಳು

ದೆಹಲಿಯಲ್ಲಿರುವ ಪುರಾತನ ಕೋಟೆಗಳು

0

ದೆಹಲಿಯು ಐತಿಹಾಸಿಕ ಸ್ಥಳಗಳಿಂದ ತುಂಬಿದೆ ಎಂಬುದು ನಿಮಗೆ ತಿಳಿದೇ ಇದೆ. ಇಲ್ಲಿ ಸಾಕಷ್ಟು ಮೊಘಲರ ಕಾಲದ ಕಟ್ಟಡಗಳನ್ನು ನೋಡಬಹುದು. ಮೊಘಲರು ನಿರ್ಮಿಸದ ಹಾಗು ಸಾಕಷ್ಟು ವರ್ಷಗಳಿಗಿಂತಲೂ ಹಳೆಯ ಕಟ್ಟಡಗಳು ಇಲ್ಲಿ ಸಾಕಷ್ಟಿವೆ.

ಹಿಂದೂ ಸಾಹಿತ್ಯದ ಪ್ರಕಾರ, ಈ ಪುರಾಣ ಕಿಲಾ ಕೋಟೆಯಿರುವ ಸ್ಥಳವು ಒಂದು ಕಾಲದಲ್ಲಿ ಪಾಂಡವರ ರಾಜಧಾನಿಯಾಗಿತ್ತು. ಇದನ್ನು ಅಂದು ಇಂದ್ರಪ್ರಸ್ಥ ಎಂದು ಕರೆಯುತ್ತಿದ್ದರು.

ಪಾಂಡವರ ಕೋಟೆ

ಅದೇ ಕೋಟೆಯಲ್ಲಿ ಹುಮಾಯೂನ್ ಮೆಟ್ಟಿಲುಗಳಿಂದ ಜಾರಿ ಬಿದ್ದು ಮರಣಿಸಿದನು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಇದನ್ನು ಪಾಂಡವರ ಕೋಟೆ ಎಂದೇ ಕರೆಯುತ್ತಾರೆ. ಕೋಟೆಯು ಮೂರು ಕಮಾನುಗಳಿಂದ ಸುತ್ತುವರಿದ ಪ್ರವೇಶದ್ವಾರಗಳನ್ನು ಹೊಂದಿದೆ. ಪಶ್ಚಿಮದಲ್ಲಿ ದೊಡ್ಡ ಬಾಗಿಲು, ದಕ್ಷಿಣದಲ್ಲಿ ಹುಮಾಯೂನ್ ಬಾಗಿಲು ಎಂದು ಕರೆಯ್ಪಡುವ ದ್ವಾರಗಳಿವೆ.

ನಿಮಗಿದು ತಿಳಿದಿರಲಿ, ದೆಹಲಿಯ ಅತ್ಯಂತ ದೊಡ್ಡ ಕೋಟೆ ಹಾಗು ದೆಹಲಿಯ ಅತ್ಯಂತ ಹಳೆಯ ಕೋಟೆ ಈ ಪುರಾಣ ಕಿಲಾ ಕೋಟೆಯಾಗಿದೆ. ಇದನ್ನು ಪುರಾಣ ಕಿಲಾ ಎಂದೂ ಸಹ ಕರೆಯುತ್ತಾರೆ. ವಾಸ್ತವವಾಗಿ, ಕೋಟೆಯ ನಿಜವಾದ ಹೆಸರು ಸಿಂಹದ ಕೋಟೆ.

ಮಹಾಭಾರತ ಕಾಲದ್ದು…

ಈ ಪಾಂಡವರ ಕೋಟೆಯು ಮಹಾಭಾರತದ ಕಾಲದ್ದು ಎಂದು ನಂಬಲಾಗಿದೆ. ಕೋಟೆಯ ಒಳಭಾಗದಲ್ಲಿ ಕುಂತಿ ದೇವಿಯ ಆಲಯವಿದೆ. ಪಾಂಡವರು ಈ ಸ್ಥಳದಲ್ಲಿ ವಾಸಿಸಲು ಬಂದಾಗ ಕುಂತಿ ದೇವಾಲಯವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಕೋಟೆಗೆ ‘ಪಾಂಡವರ ಕೋಟೆ’ ಎಂಬ ಹೆಸರು ಬಂದಿತು.

ಹುಮಾಯೂನ್ ಮರಣ ಹೇಗಿತ್ತು ಗೊತ್ತಾ?

ಮೊಘಲರ ರಾಜರಲ್ಲಿ ಒಬ್ಬನಾದ ಹುಮಾಯೂನ್ನ ಮರಣ ಈ ಕೋಟೆಯಲ್ಲಿಯೇ ಆಯಿತು ಎಂದು ಇತಿಹಾಸ ತಿಳಿಸುತ್ತದೆ. 1556 ಜನವರಿ 27 ರಂದು ಹುಮಾಯೂನ್ನ ಕೈಯಲ್ಲಿ ಹೆಚ್ಚು ಪುಸ್ತಕಗಳಿದ್ದವು. ತನ್ನ ಗ್ರಂಥಾಲಯದಿಂದ ಮೆಟ್ಟಿಲುಗಳಿಂದ ಕೆಳಗೆ ಇಳಿಯುತ್ತಿದ್ದನು. ಮಹಮ್ಮದೀಯ ಪ್ರಾರ್ಥನೆ ಕಿವಿಗೆ ಬಿದ್ದಾಗ ಧಾರ್ಮಿಕ ಭಕ್ತಿಯಿಂದ ಮಂಡಿ ಬಾಗಿಸುವುದು ಆತನ ಅಭ್ಯಾಸವಾಗಿತ್ತು. ಮಂಡಿಯೂರುವಾಗ ಪಾದವು ನಿಲುವಂಗಿಗೆ ಸಿಲುಕಿಕೊಂಡು ಮೆಟ್ಟಿಲುಗಳಿಂದ ಉರುಳಿಕೊಂಡು ಒರಟಾದ ಕಲ್ಲಿನ ತುದಿಗೆ ಹಣೆ ಬಡಿಯಿತು. 3 ದಿನಗಳಾದ ನಂತಹ ಪ್ರಾಣ ಪಕ್ಷಿ ಹಾರಿ ಹೋಯಿತು.

ಈ ಘಟನೆ ನಡೆದ ಕೆಲವು ವರ್ಷಗಳ ನಂತರ ಮೊಘಲರು ಕೋಟೆಯನ್ನು ಖಾಲಿ ಮಾಡಲು ನಿರ್ಧರಿಸಿದರು. ಹುಮಾಯೂನ್ ನಂತರ ಅಕ್ಬರ್ ತನ್ನ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿದನು. ವಿದೇಶಿ ಆಕ್ರಮಣದಿಂದ ದೆಹಲಿಯನ್ನು ರಕ್ಷಿಸಲು ಕೆಂಪು ಕೋಟೆಯನ್ನು ನಿರ್ಮಿಸಿದನು.

ಈ ಪುರಾನ ಕಿಲಾದ ಪ್ರವೇಶ ಶುಲ್ಕ

ಅಷ್ಟಕ್ಕೂ ಈ ಪುರಾನ ಕಿಲಾ ಅಥವಾ ಹಳೆಯ ಕೋಟೆಯ ಸೌಂದರ್ಯ ನೋಡಲು ಪ್ರವಾಸಿಗರು ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಭಾರತೀಯ ವ್ಯಕ್ತಿಗೆ 5 ರೂಪಾಯಿ ಹಾಗು ವಿದೇಶಿ ಪ್ರವಾಸಿಗರಿಗೆ 100 ರೂಪಾಯಿಗಳಾಗಿವೆ. ಛಾಯಾಗ್ರಹಣಕ್ಕೆ ಯಾವುದೇ ಶುಲ್ಕವಿಲ್ಲದಿದ್ದರು, ವಿಡಿಯೋಗ್ರಫಿಗೆ 25 ರೂ ಪ್ರತ್ಯೇಕವಾಗಿ ಪಾವತಿಸಬೇಕು.

ಈ ಪುರಾನ ಕಿಲಾ ಕೋಟೆಗೆ ತಲುಪುವ ಬಗೆ ಹೇಗೆ?

ಹಳೆಯ ಕೋಟೆ ದೆಹಲಿಯಲ್ಲಿರುವುದರಿಂದ ಇಲ್ಲಿಗೆ ಆರಾಮವಾಗಿ ಹೋಗಬಹುದು. ವಿಮಾನ ನಿಲ್ದಾಣದ ಮೂಲಕ, ರೈಲು ನಿಲ್ದಾಣದ ಮೂಲಕ ಮತ್ತು ರಸ್ತೆ ಮಾರ್ಗದ ಮೂಲಕವು ಹೋಗಬಹುದು. ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಇಲ್ಲಿಗೆ ಯೋಜಿಸುತ್ತಿದ್ದರೆ, ರಜಾದಿನಗಳಲ್ಲಿ ನೀವು ಆರಾಮವಾಗಿ ಹಳೆಯ ಕೋಟೆಗೆ ಭೇಟಿ ನೀಡಬಹುದು. ಇದು ದೆಹಲಿ ಮೃಗಾಲಯಕ್ಕೆ ಬಹಳ ಸಮೀಪದಲ್ಲಿದೆ.

ಹಿಂದಿನ ಲೇಖನಎಸ್ಎಸ್ಎಲ್’ಸಿ ಪರೀಕ್ಷೆ: ಪ್ರಸಾರ ಭಾರತಿಯಲ್ಲಿ ಫೆ.27 ರಿಂದ ಬಾನ್ ದನಿ ವಿಶೇಷ ಕಾರ್ಯಕ್ರಮ
ಮುಂದಿನ ಲೇಖನಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಡಬ್ಲ್ಯುಸಿ ಸದಸ್ಯರ ನಾಮ ನಿರ್ದೇಶನ ಮಾಡುವ ಅಧಿಕಾರ