ಮನೆ ಸುದ್ದಿ ಜಾಲ ಕರಾಮುವಿಯ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ: ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಕೋರ್ಟ್

ಕರಾಮುವಿಯ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ: ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಕೋರ್ಟ್

0

ಬೆಂಗಳೂರು(Bengaluru): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 25 ಅಸೋಸಿಯೇಟ್ ಪ್ರೊಫೆಸರ್ ಹಾಗೂ 7 ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮುಂದೂಡಿದೆ.

ಹುದ್ದೆ ನೇಮಕಾತಿಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧಿಸಿದಂತೆ ಏ. 12 ರಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತೆರವಿಗೆ ಮನವಿ ಸಲ್ಲಿಸಿತ್ತು. ಈ ಸಂಬಂದ ಏ. 20 ರಂದು ಅರ್ಜಿ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.

ಉಚ್ಚನ್ಯಾಯಾಲಯದ ಬೇಸಿಗೆ ರಜೆಯು ಏಪ್ರಿಲ್ 25 ರಿಂದ ಮೇ. 23 ರ ವರೆಗೆ ಇರುವುದರಿಂದ, ಈ ಪ್ರಕರಣವು ಮುಂದಿನ ತಿಂಗಳು ಮೇ 23 ರ ನಂತರ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ಈ ಪ್ರಕರಣದ ಮಧ್ಯಂತರ ತಡೆಯಾಜ್ಞೆ ಮುಂದುವರೆದಿರುತ್ತದೆ.

ಹಿಂದಿನ ಲೇಖನಸರ್ಕಾರ ಸಹಕಾರ ನೀಡಿದರೆ ದೇವರಾಜ ಮಾರುಕಟ್ಟೆ ಪುನಶ್ಚೇತನಗೊಳಿಸುತ್ತೇವೆ: ಪ್ರಮೋದಾದೇವಿ ಒಡೆಯರ್
ಮುಂದಿನ ಲೇಖನಐಪಿಎಸ್ ಅಧಿಕಾರಿ ಜೊತೆ ದಿವ್ಯಾ ಹಾಗರಗಿ: ಫೋಟೊ ವೈರಲ್