ಮನೆ ಅಪರಾಧ ಮಹಿಳೆಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್’ನಲ್ಲಿಟ್ಟಿದ್ದ ವ್ಯಕ್ತಿಯ ಬಂಧನ

ಮಹಿಳೆಯನ್ನು ಕೊಂದು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್’ನಲ್ಲಿಟ್ಟಿದ್ದ ವ್ಯಕ್ತಿಯ ಬಂಧನ

0

ಹೈದರಬಾದ್: ಮಹಿಳೆಯನ್ನು ಕೊಂದು ದೇಹದ ಭಾಗಗಳನ್ನು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ​ನಲ್ಲಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹೈದರಾಬಾದ್​ ನಲ್ಲಿ ನಡೆದಿದೆ.

Join Our Whatsapp Group

ವ್ಯಕ್ತಿ ಆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ತಿಳಿದುಬಂದಿದೆ. ಡಂಪಿಂಗ್ ಯಾರ್ಡ್‌ ನಲ್ಲಿ 55 ವರ್ಷದ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾದ ನಂತರ 48 ವರ್ಷದ ವ್ಯಕ್ತಿಯನ್ನು ಒಂದು ವಾರದ ತನಿಖೆಯ ನಂತರ ಬಂಧಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಣಕ್ಕೋಸ್ಕರ ಕೊಲೆ ನಡೆದಿದೆ, ಆರೋಪಿ ಚಂದ್ರಮೋಹನ್​ ಸಂತ್ರಸ್ತೆ ಅನುರಾಧಾ ರೆಡ್ಡಿಗೆ 7 ಲಕ್ಷ ರೂ ನೀಡಬೇಕಿತ್ತು, ಈ ವಿಚಾರವಾಗಿ ಅವರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.

ಚಂದ್ರಮೋಹನ್​’ಗೆ ಮದುವೆಯಾಗಿರಲಿಲ್ಲ, ಅನುರಾಧ ವಿಧವೆಯಾಗಿದ್ದು, ಹಲವು ವರ್ಷಗಳ ಹಿಂದೆ ಪತಿ ನಿಧನರಾದ ನಂತರ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು 15 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು, 2018 ರಲ್ಲಿ ಅನುರಾಧ ಚಂದ್ರಮೋಹನ್‌ ಗೆ 7 ಲಕ್ಷ ರೂಪಾಯಿ ಸಾಲ ನೀಡಿದ್ದರು, ಪದೇ ಪದೇ ಮನವಿ ಮಾಡಿದರೂ ಆ ಹಣವನ್ನು ಹಿಂದಿರುಗಿಸಿರಲಿಲ್ಲ.

ಹಣವನ್ನು ಹಿಂದಿರುಗಿಸುವಂತೆ ಸತತ ಒತ್ತಡದಿಂದ ಚಂದ್ರಮೋಹನ್ ಅನುರಾಧಾಳ ವರ್ತನೆಯಿಂದ ಕೋಪಗೊಂಡಿದ್ದ ಎಂಬುದು ತಿಳಿದುಬಂದಿದೆ. ಮೇ 12 ರಂದು ಪರಿಸ್ಥಿತಿ ಉಲ್ಬಣಗೊಂಡಿತು. ಜಗಳದ ನಂತರ ಚಾಕುವಿನಿಂದ ಇರಿದು ಅನುರಾಧಾರನ್ನು ಹತ್ಯೆ ಮಾಡಿದ್ದ.

ದೇಹವನ್ನು ವಿಲೇವಾರಿ ಮಾಡಲು ಆತ ಎರಡು ಸಣ್ಣ ಕಲ್ಲು ಕತ್ತರಿಸುವ ಯಂತ್ರಗಳನ್ನು ಖರೀದಿಸಿದ್ದ, ತಲೆ ಕತ್ತರಿಸಿ ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ್ದ. ಕಾಲುಗಳು ಮತ್ತು ಕೈಗಳನ್ನು ಬೇರ್ಪಡಿಸಿ ಅವರ ನಿವಾಸದಲ್ಲಿ ರೆಫ್ರಿಜರೇಟರ್‌ ನಲ್ಲಿ ಇಟ್ಟಿದ್ದ. ಆದರೆ ದೇಹದ ಉಳಿದ ಭಾಗಗಳನ್ನು ಸೂಟ್‌ ಕೇಸ್‌ ನಲ್ಲಿ ತುಂಬಿದ್ದ.

ಮೇ 15 ರಂದು ಮೂಸಿ ನದಿಯ ಬಳಿ ಆಕೆಯ ತಲೆಯನ್ನು ಎಸೆದು ಬಂದಿದ್ದ, ದುರ್ವಾಸನೆ ಬರುವುದನ್ನು ತಡೆಯಲು ಅಗರಬತ್ತಿ, ಫಿನಾಯಿಲ್, ಮತ್ತು ಸುಗಂಧ ದ್ರವ್ಯಗಳನ್ನು ಹಾಕಿದ್ದ.

ಮಹಿಳೆಯ ತುಂಡರಿಸಿದ ತಲೆ ಮೇ 17 ರಂದು ನಗರದ ಮೂಸಿ ನದಿಯ ಬಳಿ ಸ್ಥಳೀಯ ಕಾರ್ಮಿಕರಿಗೆ ಸಿಕ್ಕಿತ್ತು. ಮಲಕ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದರು.

ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣದ ತನಿಖೆ ಮತ್ತು ಭೇದಿಸಲು ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿದ್ದರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅವರು ಪರಿಶೀಲಿಸಿ, ಸೂಕ್ತ ತನಿಖೆಗೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನನಿಂತಿದ್ದ ಬಸ್’ಗೆ ಟಿಟಿ ಢಿಕ್ಕಿ: ಇಬ್ಬರ ಸಾವು, ಹಲವರಿಗೆ ಗಾಯ
ಮುಂದಿನ ಲೇಖನಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ