ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ‘ಭೈರತಿ ರಣಗಲ್’ ಚಿತ್ರವು ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ಟೇರಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಮತ್ತು ‘ಮಫ್ತಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಮೂಲಕ ಬಾಲಿವುಡ್ ನಟ ರಾಹುಲ್ ಬೋಸ್ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಬರುತ್ತಿದ್ದಾರೆ. ಅವರು ಈ ಹಿಂದೆ ಅಪೂರ್ವ ಕಾಸರವಳ್ಳಿ ನಿರ್ದೇಶನದ ‘ನಿರುತ್ತರ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಹಿಂದಿ, ತೆಲುಗು, ತಮಿಳು, ಬೆಂಗಾಲಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ನಟ ರಾಹುಲ್ ಬೋಸ್ ಸಮಾಜ ಸೇವೆಗಳಿಂದಲೂ ಒಂದಷ್ಟು ಹೆಸರು ಮಾಡಿದ್ದಾರೆ. ನಿರ್ದೇಶನ ಮತ್ತು ಬರವಣಿಗೆಯಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
‘ನಟ ರಾಹುಲ್ ಬೋಸ್ ಬರುವುದು ಶೇ.99ರಷ್ಟು ಕನ್ಫರ್ಮ್ ಆಗಿದೆ. ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ನಡೆದಿದ್ದು, ಕಥೆಯನ್ನು ಸಹ ಅವರಿಗೆ ಕಳಿಸಲಾಗಿದೆ. ಭೈರತಿ ರಣಗಲ್ ಸಿನಿಮಾದಲ್ಲಿ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ನಿರ್ದೇಶಕ ನರ್ತನ್ ಹೇಳಿದ್ದಾರೆ.
‘ಈ ಸಿನಿಮಾದಲ್ಲಿ ರಾಹುಲ್ ಬೋಸ್ ಹೊಸ ರೀತಿಯಲ್ಲಿಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ‘ಮಫ್ತಿ’ ಚಿತ್ರದಲ್ಲಿದ್ದ ಹಲವು ಕಲಾವಿದರು ಇದರಲ್ಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನರ್ತನ್.
ಜೂನ್ ತಿಂಗಳಿನಿಂದ ‘ಭೈರತಿ ರಣಗಲ್’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ‘ಮಫ್ತಿ’ ಸಿನಿಮಾದಲ್ಲಿದ್ದ ವಿನಯ್ ಕೃಷ್ಣಸ್ವಾಮಿ, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ದೇವರಾಜ್ ಸೇರಿದಂತೆ ಹಲವು ಕಲಾವಿದರು ಇದರಲ್ಲಿಯೂ ಮುಂದುವರೆಯಲಿದ್ದಾರೆ. ಆ ಸಿನಿಮಾಗೆ ಕೆಲಸ ಮಾಡಿದ್ದ ಸಿನಿಮಾಟೋಗ್ರಾಫರ್ ನವೀನ್ ಕುಮಾರ್ ಐ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ‘ಭೈರತಿ ರಣಗಲ್’ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.
ಸದ್ಯ ಶುರುವಾಗಿರುವ ‘ಭೈರತಿ ರಣಗಲ್’ ಸಿನಿಮಾವು ‘ಮಫ್ತಿ’ ಸಿನಿಮಾದ ಪ್ರಿಕ್ವೇಲ್ ಆಗಿದೆ. ಒಂದುವೇಳೆ, ‘ಭೈರತಿ ರಣಗಲ್ ಭಾಗ 2’ ಬರುವ ಸಾಧ್ಯತೆಗಳಿವೆಯಾ? ಅದಕ್ಕೆ ಉತ್ತರ ನೀಡಿರುವ ನಿರ್ದೇಶಕ ನರ್ತನ್, ‘ಈ ಸಿನಿಮಾದ ಕಥೆ ಬರೆದಂತೆ ದೊಡ್ಡದಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭೈರತಿ ರಣಗಲ್ ಭಾಗ 2 ಸಹ ಮಾಡುವಂತಹ ಅವಕಾಶ ಇದೆ. ಅದಿನ್ನೂ ನಿರ್ಧಾರವಾಗಿಲ್ಲ. ಕಥೆ ಮತ್ತು ಚಿತ್ರಕಥೆ ಮುಂದುವರೆದ ಭಾಗ ಮಾಡುವಷ್ಟರ ಮಟ್ಟಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ‘ಗೀತಾ ಪಿಕ್ಚರ್ಸ್’ನಲ್ಲಿ ಮೊದಲ ಪ್ರಯತ್ನವಾಗಿ ‘ವೇದ’ ತೆರೆಕಂಡಿತ್ತು. ಕನ್ನಡದಲ್ಲಿ ತೆರೆಕಂಡಿದ್ದ ಆ ಸಿನಿಮಾವನ್ನು ನಂತರ ತೆಲುಗು ಭಾಷೆಗೂ ಡಬ್ ಮಾಡಲಾಗಿತ್ತು. ಇದೀಗ ‘ಗೀತಾ ಪಿಕ್ಚರ್ಸ್’ನ ಎರಡನೇ ಸಿನಿಮಾವಾಗಿ ‘ಭೈರತಿ ರಣಗಲ್’ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ. ‘ಮಫ್ತಿ’ ಚಿತ್ರದಲ್ಲಿದ್ದಂತೆಯೇ ಇಲ್ಲಿಯೂ ಶಿವಣ್ಣನ ಲುಕ್ ಮುಂದುವರಿಯಲಿದ್ದು, ಒಂದಷ್ಟು ಬೇರೆ ಥರದ ಲುಕ್ ಇರಲಿದೆಯಂತೆ.
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
ಮನೆ ಮಾರಾಟಕ್ಕೆಮನೆ ಮಾರಾಟಕ್ಕೆ….
ಅಮೆರಿಕದಲ್ಲೂ ಕೂಡ ಹೆಚ್ಚಾಗುತ್ತಿದ್ದಾರೆ ಭಾರತೀಯರು.
27ರೂ. ಗೆ, 28000 ಸಾವಿರ ದಂಡ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.