ಮನೆ ರಾಷ್ಟ್ರೀಯ ಕಣಿವೆಗೆ ಉರುಳಿದ ಬಸ್: ಐವರ ಸಾವು, 15 ಮಂದಿಗೆ ಗಾಯ

ಕಣಿವೆಗೆ ಉರುಳಿದ ಬಸ್: ಐವರ ಸಾವು, 15 ಮಂದಿಗೆ ಗಾಯ

0

ಶ್ರೀನಗರ: ಕಣಿವೆಗೆ ಬಸ್ ಉರುಳಿದ ಪರಿಣಾಮ ಮಹಿಳೆ ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬಿಲಾವರ್’ನ ಧನು ಪರೋಲೆ ಗ್ರಾಮದಲ್ಲಿ ನಡೆದಿದೆ.

ವಾಹನವು ಕೌಗ್ ನಿಂದ ಧನು ಪರೋಲೆಗೆ ತೆರಳುತ್ತಿತ್ತು. ಈ ವೇಳೆ ಸ್ಕಿಡ್ ಆಗಿ ಕಣಿವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಒಬ್ಬರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರನ್ನು ಬಂಟು, ಹನ್ಸ್ ರಾಜ್, ಅಜೀತ್ ಸಿಂಗ್, ಅಮ್ರೂ ಮತ್ತು ಕಾಕು ರಾಮ್ ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ 15 ಮಂದಿ ಪ್ರಯಾಣಿಕರನ್ನು ಬಿಲಾವರ್ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ಲೇಖನದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ವೇತನ ಕುರಿತ ಪ್ರಕರಣ : ₹50,000 ದಂಡ ಪಾವತಿಸಿದ ಮರುಪರಿಶೀಲನಾ ಪ್ರಾಧಿಕಾರಿ
ಮುಂದಿನ ಲೇಖನಫೆ.6ರಂದು ರಾಜ್ಯಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ