ಮನೆ ರಾಜ್ಯ ಚಾಮರಾಜನಗರ: ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿ- ಚಾಲಕ ಸಾವು

ಚಾಮರಾಜನಗರ: ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿ- ಚಾಲಕ ಸಾವು

0

ಚಾಮರಾಜನಗರ(Chamarajanagara): ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೊತ್ತಲವಾಡಿ ಗ್ರಾಮದಲ್ಲಿ ಇಂದು ನಡೆದಿದೆ.

ಕೊತ್ತಲವಾಡಿ ಗ್ರಾಮದ ಶಿವಕುಮಾರ್ (30) ಮೃತ ವ್ಯಕ್ತಿ.

ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರಿಗೆ ಪತ್ನಿ, 6 ತಿಂಗಳಿನ ಮಗುವಿದೆ ಎಂದು ಮೂಲಗಳು ತಿಳಿಸಿವೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಿಂದಿನ ಲೇಖನಮಕ್ಕಳಿಗೆ ಹಬ್ಬದೂಟ ಉಣಬಡಿಸದೇ ಪಾನಮತ್ತಳಾಗಿದ್ದ ಪತ್ನಿಯ ಹತ್ಯೆ ಉದ್ದೇಶ ಪೂರ್ವಕವಲ್ಲವೆಂದು ಶಿಕ್ಷೆ ತಗ್ಗಿಸಿದ ಹೈಕೋರ್ಟ್
ಮುಂದಿನ ಲೇಖನಲೋಕಾ ವೆಬ್’ಸೈಟ್’ನಲ್ಲಿ ಎಫ್ಐಆರ್ ಹಾಕಲು ಕೋರಿಕೆ: ರಾಜ್ಯ ಸರ್ಕಾರ, ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್