ಮನೆ ರಾಜ್ಯ ವಿರಾಜಪೇಟೆ: ಬಾಲಕಿಯರನ್ನು ಹಿಂಬಾಲಿಸುತ್ತಿದ್ದ ಕಾನ್‌ ಸ್ಟೇಬಲ್‌ ಬಂಧನ

ವಿರಾಜಪೇಟೆ: ಬಾಲಕಿಯರನ್ನು ಹಿಂಬಾಲಿಸುತ್ತಿದ್ದ ಕಾನ್‌ ಸ್ಟೇಬಲ್‌ ಬಂಧನ

0

ವಿರಾಜಪೇಟೆ (Virajpet): ಒಂಟಿಯಂಗಡಿ ಗ್ರಾಮದಲ್ಲಿ ಶಾಲಾ ಬಾಲಕಿಯರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇರೆಗೆ ಅಮ್ಮತ್ತಿಯ ಪೊಲೀಸ್ ಉಪಠಾಣೆಯ ಕಾನ್‌ ಸ್ಟೇಬಲ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ್ (27) ಬಂಧಿತ ಕಾನ್‌ ಸ್ಟೇಬಲ್‌. ಮೈಸೂರಿನ ಆಲನಹಳ್ಳಿ ನಿವಾಸಿಯಾದ ಈತ 6 ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಸೇರಿದ್ದ. ಕೆಲವು ದಿನಗಳಿಂದ ಬಾಲಕಿಯರನ್ನು ಹಿಂಬಾಲಿಸುವುದು, ಕೈ ಸನ್ನೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಮೊಬೈಲ್‌ನಲ್ಲಿ ಚಿತ್ರ, ವಿಡಿಯೋಗಳನ್ನು ತೆಗೆಯಲು ಯತ್ನಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಗ್ರಾಮಸ್ಥರ ಬಳಿ ದೂರಿದರು. ಬಾಲಕಿಯರು ತೆರಳುತ್ತಿದ್ದ ಆಟೋವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಈತನನ್ನು ಗ್ರಾಮಸ್ಥರೇ ಹಿಡಿದು ಕೂಡಿ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಬಂದು ಗ್ರಾಮಸ್ಥರ ಮನವೊಲಿಸಿದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಹೇಳಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನವಿಂಡೀಸ್‌ ವಿರುದ್ಧದ ಕೊನೆಯ ಏಕದಿನ ಪಂದ್ಯ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ
ಮುಂದಿನ ಲೇಖನಚಿತ್ರೀಕರಣದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಗಾಯ: ಆಸ್ಪತ್ರೆಗೆ ದಾಖಲು