ಮನೆ Uncategorized ಸಿಎಂ ಜೊತೆ ಚರ್ಚಿಸಿ ಸಾರಿಗೆ  ನೌಕರರ ಬೇಡಿಕೆ ಈಡೇರಿಸಲಾಗುವುದು: ಕೆಎಸ್‌’ಆರ್‌’ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ

ಸಿಎಂ ಜೊತೆ ಚರ್ಚಿಸಿ ಸಾರಿಗೆ  ನೌಕರರ ಬೇಡಿಕೆ ಈಡೇರಿಸಲಾಗುವುದು: ಕೆಎಸ್‌’ಆರ್‌’ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ

0

ಮೈಸೂರು(Mysuru): ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಈಡೇರಿಸಲಾಗುವುದು ಎಂದು ಕೆಎಸ್‌’ಆರ್‌’ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಭರವಸೆ ನೀಡಿದರು.

ಇಲ್ಲಿನ ವಿಛಾಗೀಯ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.24ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮುಷ್ಕರ ಸಾರಿಗೆ ನೌಕರರು ಕೈಬಿಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಸಾರಿಗೆ ಸಂಸ್ಥೆಗಳ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಡೀಕರಣಗಳ ಸಂಪೂರ್ಣ ಅಧ್ಯಯನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಏಕ ಸದಸ್ಯ ಸಮಿತಿನ್ನು ಸರ್ಕಾರ ನೇಮಿಸಿದೆ. ಸಮಿತಿಯು ಮಧ್ಯಂತರ ವರದಿಯನ್ನೂ ನೀಡಿದೆ. ನೌಕರರ ಬೇಡಿಕೆ ನ್ಯಾಯಯುತವಾಗಿವೆ ಎಂದರು.

ಕೋವಿಡ್‌ ಸಂದರ್ಭದಲ್ಲಿ ನಿಗಮವು ನಷ್ಟದಲ್ಲಿದ್ದಾಗಲೂ ವೇತನ ನೀಡಿ ಮಾನವೀಯವಾಗಿ ನಡೆದುಕೊಂಡಿದೆ. ಶ್ರೀನಿವಾಸಮೂರ್ತಿ ಸಮಿತಿ ಪೂರ್ಣ ವರದಿ ನೀಡುತ್ತಿದ್ದಂತೆಯೇ ಸಿ.ಎಂ ಜೊತೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು. ನೌಕರರ ಸಂಘಟನೆಯ ಪ್ರಮುಖರ ಜೊತೆಗೆ ಮಾತುಕತೆಗೂ ಸಿದ್ಧ ಎಂದು ತಿಳಿಸಿದರು.

ಮಧ್ಯಂತರ ವರದಿಯಲ್ಲಿ ಕಂಡಕ್ಟರ್‌ ರಹಿತ ಬಸ್‌, ಎಲೆಕ್ಟ್ರಾನಿಕ್‌ ಬಸ್‌’ಗಳ ಹೆಚ್ಚಳ, ಒಂದೇ ಬಾಗಿಲಿನ ಬಸ್‌ ಸೇರಿದಂತೆ ಹಲವು ಅಂಶಗಳ ಜಾರಿಗೆ ಸಲಹೆ ನೀಡಿದ್ದು, ಪರಿಗಣಿಸಲಾಗುವುದು ಎಂದರು.

ಡೀಸೆಲ್‌ ದರ ಹೆಚ್ಚುತ್ತಿದ್ದರೂ 4 ವರ್ಷಗಳಿಂದ ಪ್ರಯಾಣಿಕರ ಟಿಕೆಟ್‌ ದರ ಹೆಚ್ಚಳಗೊಳಿಸಿಲ್ಲ. ನಷ್ಟದಲ್ಲಿದ್ದರೂ ಸಿಬ್ಬಂದಿ ವೇತನ ‍ಪಾವತಿಸಲಾಗಿದೆ. 1 ಲಕ್ಷ ಕಟ್ಟಡ ಹಾಗೂ ಪೌರ ಕಾರ್ಮಿಕರಿಗೆ ಬಸ್‌ ಪಾಸ್‌ ಉಚಿತವಾಗಿ ನೀಡಲಾಗಿದೆ. ಕೆಎಸ್‌’ಆರ್‌’ಟಿಸಿ ನೌಕರರಿಗೆ ತಲಾ ₹ 1 ಕೋಟಿ ವಿಮೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಾವಿರ ಬಸ್‌ ಖರೀದಿ‘ಪ್ರಯಾಣಿಕರಿಗೆ ವಿಮಾನ ಮಾದರಿಯ ಸೇವೆ ನೀಡಲು 350 ಎಲೆಕ್ಟ್ರಿಕ್‌ ಬಸ್‌ ಸೇರಿದಂತೆ ಒಂದು ಸಾವಿರ ಬಸ್‌ ಖರೀದಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎಂ.ಚಂದ್ರಪ್ಪ ಹೇಳಿದರು.

ನಿಗಮದಲ್ಲಿ 1.3 ಲಕ್ಷ ಬಸ್‌ ಇದ್ದು, ಅದರಲ್ಲಿ 3 ಸಾವಿರ ಬಸ್‌’ಗಳನ್ನು ಗುಜರಿಗೆ ಹಾಕಲಾಗುವುದು. ಡೀಸೆಲ್‌ ದರ ಹೆಚ್ಚಾಗುತ್ತಿರುವುದರಿಂದ 450 ಕಿ.ಮೀ ಸಾಮರ್ಥ್ಯ ಬ್ಯಾಟರಿಯುಳ್ಳ ಅತ್ಯಾಧುನಿಕ ಇ.ವಿ ಬಸ್‌’ಗಳನ್ನು ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

20 ಅಂಬಾರಿ ಉತ್ಸವ್, 50 ಇ.ವಿ, 40 ಸ್ಲೀಪರ್‌, 222 ವೀಲ್‌ ಬೇಸ್‌, 13.5 ಮೀಟರ್‌’ನ 4 ಹವಾ ನಿಯಂತ್ರಿತ ಹಾಗೂ 4 ಸಾಮಾನ್ಯ, 50 ಸಿಟಿ ಬಸ್‌ ಹಾಗೂ 550 ಬಸ್‌’ಗಳ ಖರೀದಿ ಫೆಬ್ರುವರಿಯಲ್ಲಿ ನಡೆಯಲಿದೆ ಎಂದರು.

ಹಿಂದಿನ ಲೇಖನನಗೆಹನಿ
ಮುಂದಿನ ಲೇಖನCISF ನಲ್ಲಿ 451 ‘ಕಾನ್‌ಸ್ಟೇಬಲ್ ಡ್ರೈವರ್’, ‘ಕಾನ್‌ಸ್ಟೇಬಲ್ ಡಿಸಿಪಿಒ’ ನೇಮಕಾತಿಗೆ ಅರ್ಜಿ ಆಹ್ವಾನ