ಮನೆ ಕಾನೂನು ಸಕಾರಣವಿಲ್ಲದೇ ರಜೆ ಕೇಳಿದರೆ ಶಿಸ್ತುಕ್ರಮ: ಡಿಸಿಪಿ ಆದೇಶಕ್ಕೆ ಪೊಲೀಸ್ ವಲಯದಲ್ಲಿ ಅಸಮಧಾನ

ಸಕಾರಣವಿಲ್ಲದೇ ರಜೆ ಕೇಳಿದರೆ ಶಿಸ್ತುಕ್ರಮ: ಡಿಸಿಪಿ ಆದೇಶಕ್ಕೆ ಪೊಲೀಸ್ ವಲಯದಲ್ಲಿ ಅಸಮಧಾನ

0

ಬೆಂಗಳೂರು(Bengaluru): ಸಕಾರಣವಿಲ್ಲದೆ ರಜೆ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ‌ ಸಿ.ಕೆ. ಬಾಬಾ ಆದೇಶ ಹೊರಡಿಸಿರುವುದಕ್ಕೆ ಪೊಲೀಸ್ ವಲಯದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ.

ತಮ್ಮ ವ್ಯಾಪ್ತಿಯಲ್ಲಿರುವ ಲಿಪಿಕ ಸಿಬ್ಬಂದಿ, ಸಿಬ್ಬಂದಿ ಹಾಗೂ ಅಧಿಕಾರಿ‌ ಮಟ್ಟದ ಪೊಲೀಸರು ಕಾರಣವಿಲ್ಲದೆ ರಜೆ ತೆಗೆದುಕೊಳ್ಳುವಂತಿಲ್ಲ. ಸಂಬಂಧಿಗಳು ಮೃತಪಟ್ಟ ಸಂದರ್ಭದಲ್ಲಿ ಅಥವಾ ಅನಾರೋಗ್ಯಕ್ಕೆ‌ ಒಳಗಾದಾಗ ಮಾತ್ರ ರಜೆ ಪಡೆಯಬೇಕು.‌ ಅನಿವಾರ್ಯ ಕಾರಣ ಹೊರತುಪಡಿಸಿ ಪದೇ ಪದೇ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು‌.‌ ಆಯಾ ವಿಭಾಗದ ಎಸಿಪಿ ಹಾಗೂ ಇನ್ ಸ್ಪೆಕ್ಟರ್​ಗಳು ರಜೆಗೆ ಅನುಮತಿ ನೀಡಕೂಡದು ಎಂದು ಸೂಚಿಸಲಾಗಿದೆ.

ಪದೇ ಪದೇ ಕಚೇರಿಗೆ ಬಂದು ರಜೆ‌ ಬಗ್ಗೆ ಪ್ರಸ್ತಾಪಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಜೆ ಅನಿವಾರ್ಯ ಎಂದಾದಾಗ ತಮ್ಮ ಅನುಮತಿ‌ ಪಡೆದುಕೊಳ್ಳಬೇಕೆಂದು ಡಿಸಿಪಿ ಆದೇಶ ಹೊರಡಿಸಿದ್ದಾರೆ‌.

ಡಿಸಿಪಿ ಆದೇಶ ಹೊರಡಿಸುತ್ತಿದ್ದಂತೆ ಕೆಳ ಹಂತದ‌‌ ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ‌ ಸಿ.ಕೆ. ಬಾಬಾ ಕಳೆದ ತಿಂಗಳು 28ರಂದೇ ಆದೇಶ ಹೊರಡಿಸಲಾಗಿತ್ತು. ಈ‌ ಆದೇಶವು ಕೆಳಹಂತದ ಸಿಬ್ಬಂದಿಗೆ‌ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಮದ್ಯವ್ಯಸನಿ ಮಗನನ್ನು ಕೊಲ್ಲಲು ಪೋಷಕರಿಂದಲೇ ಸುಪಾರಿ
ಮುಂದಿನ ಲೇಖನಮೈಸೂರು:  67ನೇ ಕನ್ನಡ ರಾಜ್ಯೋತ್ಸವ ಆಚರಣೆ