ಮನೆ ಸ್ಥಳೀಯ ವರದಕ್ಷಿಣೆ ಕಿರುಕುಳ: ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಗೃಹಿಣಿ

ವರದಕ್ಷಿಣೆ ಕಿರುಕುಳ: ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಗೃಹಿಣಿ

0

ಕೆ.ಆರ್.ಪೇಟೆ: ಗಂಡನ ಮನೆಯ ವರ-ದಕ್ಷಿಣೆ ಕಿರುಕುಳದಿಂದ ಬೇಸತ್ತು, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ಬಡ ಕುಟುಂಬದ ಯುವತಿ ಪ್ರೇಮಕುಮಾರಿ (೨೬) ದಿನಾಂಕ ೬-೩-೨೦೨೨ ರಂದು ಮೈಸೂರು ನಿವಾಸಿ ರಾಘವೇಂದ್ರ ಅವರಿಗೆ ವಿವಾಹವಾಗಿದ್ದ ಪ್ರೇಮಕುಮಾರಿ ಕೆಲವೇ ತಿಂಗಳು ಅನನ್ಯವಾಗಿದ್ದ ಜೋಡಿ ನಂತರ ಪ್ರೇಮಕುಮಾರಿ ತಾಯಿಯ ಮನೆಗೆ ಹಿಂತಿರುಗಿದ್ದರು. ಗಂಡನ ಸೇರಿದಂತೆ ಅವರ ಕುಟುಂಬಸ್ಥರು ನಿರಂತರ ವರದಕ್ಷಣೆ ಮತ್ತು ಕೊಲೆ ಬೆದರಿಕೆಯಿಂದ ಬೇಸತ್ತು ದಿನಾಂಕ ೨೦-೩-೨೦೨೪ ಬುಧುವಾರ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಲಿಂಗಾಪುರ ಗ್ರಾಮದಲ್ಲಿ ಸುಮಾರು ಐದು ಪುಟಗಳ ಡೆತ್ ನೋಟ್ ಬರೆದಿಟ್ಟು ಮೃತ ಪ್ರೇಮಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಕಿಕ್ಕೇರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ  ರವಾನಿಸಿದರು. ಲಿಂಗಾಪುರ ಗ್ರಾಮದಲ್ಲಿ ಮೃತ ದುರ್ದೈವಿ ಪ್ರೇಮಕುಮಾರಿ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಘಟನೆಯ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಈಶ್ವರಪ್ಪ ಮನವೊಲಿಸುವಲ್ಲಿ ನಮ್ಮ ನಾಯಕರು ಯಶಸ್ವಿಯಾಗ್ತಾರೆ: ಬಸವರಾಜ ಬೊಮ್ಮಾಯಿ
ಮುಂದಿನ ಲೇಖನ5, 8, 9ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಪ್ರಕಟ