ಮನೆ ರಾಜಕೀಯ ಮೈಸೂರು-ಬೆಂಗಳೂರು ಹೈವೇ ಕಳಪೆಯಾಗಲು ಪ್ರತಾಪ್ ಸಿಂಹ, ಸುಮಲತಾ ಕಾರಣ: ಡಾ.ಕೆ.ಅನ್ನದಾನಿ ಆರೋಪ

ಮೈಸೂರು-ಬೆಂಗಳೂರು ಹೈವೇ ಕಳಪೆಯಾಗಲು ಪ್ರತಾಪ್ ಸಿಂಹ, ಸುಮಲತಾ ಕಾರಣ: ಡಾ.ಕೆ.ಅನ್ನದಾನಿ ಆರೋಪ

0

ಮೈಸೂರು(Mysuru): ಮೈಸೂರು–ಬೆಂಗಳೂರು ಎಕ್ಸ್‌’ಪ್ರೆಸ್‌ ಹೈವೇ ಕಾಮಗಾರಿ ಕಳಪೆಯಾಗಲು ಸಂಸದರಾದ ಪ್ರತಾಪ ಸಿಂಹ  ಮತ್ತು ಸುಮಲತಾ ಇಬ್ಬರೂ ಕಾರಣ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಈಗ ಮಾಡುತ್ತಿರುವ ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದೆ. ಮೊದಲು ಇದ್ದ ರಸ್ತೆಯೇ ಬಹಳ ಉತ್ತಮವಾಗಿತ್ತು. ಯಾಕೆ ಕಳಪೆಯಾಗಿದೆ ಎಂಬುದಕ್ಕೆ ಸಂಸದರು ಉತ್ತರ ಕೊಡಲಿ‌ ಎಂದರು.

ಮಂಡ್ಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಆಣೆ–ಪ್ರಮಾಣಕ್ಕೆ ಪಂಥಾಹ್ವಾನ ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಮಿಷನ್ ಎಂದರೇನು? ಪಡೆಯುವವರಿಗೆ ಮಾತ್ರ ಕಮಿಷನ್ ವಿಚಾರ ಗೊತ್ತಿರುತ್ತದೆ. ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಿದವರನ್ನೇ ಕೇಳಿ ಎಂದು ಹೇಳಿದರು.

ಸಿನಿಮಾ ರಂಗದಲ್ಲಿನ ಹಣ ಬಿಟ್ಟು ಮತ್ತ್ಯಾವ ಹಣವನ್ನೂ ಮುಟ್ಟಿಲ್ಲ ಎಂದು ಮೊದಲು ಅವರು ಪ್ರಮಾಣ ಮಾಡಲಿ. ಆ ಮೇಲೆ ನಮ್ಮದು ನೋಡೋಣ. ಅವರು ಕರೆದ ಕೂಡಲೇ ನಾವೇಕೆ ಹೋಗಬೇಕು? ಎಂದು ಕೇಳಿದರು.

ಹಿಂದಿನ ಲೇಖನ‘ಕೆ ಡಿ-ದಿ ಡೆವಿಲ್’: ನಟ ಧ್ರುವ ಸರ್ಜಾ ಅವರೊಂದಿಗೆ ನಿರ್ದೇಶಕ ಪ್ರೇಮ್ ಹೊಸ ಸಿನಿಮಾ
ಮುಂದಿನ ಲೇಖನಡಿಸೆಂಬರ್ ತಿಂಗಳಲ್ಲಿ ಭಾರತ- ಬಾಂಗ್ಲಾ ಟೆಸ್ಟ್ ಕ್ರಿಕೆಟ್ ಸರಣಿ