ಮನೆ ರಾಜಕೀಯ ಹಾಸನ ಡಿಸಿ ಅದೆಷ್ಟು ದಿನ ಆಡ್ತಾನೋ ಆಡ್ಲಿ: ಎಚ್.ಡಿ.ರೇವಣ್ಣ ಆಕ್ರೋಶ

ಹಾಸನ ಡಿಸಿ ಅದೆಷ್ಟು ದಿನ ಆಡ್ತಾನೋ ಆಡ್ಲಿ: ಎಚ್.ಡಿ.ರೇವಣ್ಣ ಆಕ್ರೋಶ

0

ಹಾಸನ(Hassan)ಒಬ್ಬ ಶಾಸಕ ಧರಣಿ ಕೂತಿದ್ದಾನೆ ಎಂದರೆ ಸ್ಥಳಕ್ಕೆ ಒಬ್ಬ ಜಿಲ್ಲಾಧಿಕಾರಿ ಆದವರು ಬರುವುದಿಲ್ಲ ಎಂದರೆ ನಾನೇನು ದನ ಕಾಯೋನಾ? ಜಿಲ್ಲಾಧಿಕಾರಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಜಿಲ್ಲಾಧಿಕಾರಿ ಆರ್ ಗಿರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವಾಗ್ಲೂ ಬಿಜೆಪಿ ಸರ್ಕಾರ ಇರುತ್ತೆ ಅನ್ಕೊಂಡಿದ್ದಾರೆ. ನಾನು ಇಪ್ಪತ್ತೈದು ವರ್ಷದಿಂದ ಎಲ್ಲವನ್ನೂ ನೋಡಿದ್ದೇನೆ.  ಡಿಸಿ ಆಫೀಸ್ ಒಡೆದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ ಎಂದು ಬೇಸರ ಹೊರಹಾಕಿದರು.

ನನ್ನ ಕ್ಷೇತ್ರದ 2 ಹೊಬಳಿ ಹಾಗೂ ಸಕಲೇಶಪುರ ಕ್ಷೇತ್ರದ ಒಂದು ಹೋಬಳಿ ಹಾಸನ ತಾಲೂಕಿಗೆ ಸೇರುತ್ತದೆ. ಶಾಸಕರ ಕೇಳದೆ ತಹಸೀಲ್ದಾರ್ ಕಟ್ಟಡ ಒಡೆದಿದ್ದಾರೆ. ಇದಕ್ಕೆ ಅವಕಾಶ ನೀಡಿದ ಡಿಸಿ ಅವರನ್ನು ಜಿಲ್ಲಾಧಿಕಾರಿ ಎಂದು ಕರೆಯಲು ನಾಚಿಕೆಯಾಗುತ್ತೆ. ಡಿಸಿ ವಿರುದ್ಧ ರಾಜ್ಯಪಾಲರಿಗೆ, ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಎಚ್.ಡಿ. ರೇವಣ್ಣ ಕಿಡಿಕಾರಿದರು.

ಹಿಂದಿನ ಲೇಖನಈ ದಿನದ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ