ಮನೆ ರಾಜ್ಯ ಪ್ರೀತಿಸುವಂತೆ ಯುವಕನ ಕಿರುಕುಳ: ಯುವತಿ ಆತ್ಮಹತ್ಯೆ

ಪ್ರೀತಿಸುವಂತೆ ಯುವಕನ ಕಿರುಕುಳ: ಯುವತಿ ಆತ್ಮಹತ್ಯೆ

0

ಮೈಸೂರು:  ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನ ಕಿರುಕುಳ ತಾಳಲಾರದೇ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಮೈಸೂರು ತಾಲ್ಲೂಕು ಗಣಗರಹುಂಡಿ ಗ್ರಾಮದ ಹರ್ಷಿತಾ (21) ಮೃತ ಯುವತಿ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು (26) ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಆರೋಪಿ.

ಪಿಯುಸಿ ಓದಿದ್ದ ಹರ್ಷಿತಾ ಇತ್ತೀಚಿಗೆ ಕಂಪ್ಯೂಟರ್ ಕ್ಲಾಸ್ ​ಗೆ ಜಾಯಿನ್ ಆಗಿದ್ದಳು. ಹರ್ಷಿತಾಳನ್ನು ಲವ್ ಮಾಡು ಅಂತ ಶಿವು ಹಿಂದೆ ಬಿದ್ದಿದ್ದನಂತೆ. ಆದರೆ ಹರ್ಷಿತಾ ಶಿವುನ ಪ್ರಪೋಸಲ್​ ತಿರಸ್ಕರಿಸಿದ್ದಳು. ಈ ಮಧ್ಯೆ ಹರ್ಷಿತಾ ಮನೆಯವರು ಮದುವೆಗೆ ಸಿದ್ದತೆ ನಡೆಸಿದ್ದರು. ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು.

ಈ ಮಾಹಿತಿ ಅರಿತ ಶಿವು ತನ್ನನ್ನು ಪ್ರೀತಿಸಿ ಮದುವೆ ಆಗುವಂತೆ  ಒತ್ತಾಯ ಮಾಡುತ್ತಿದ್ದನಂತೆ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ತಿಳಿದ ಮನೆಯವರು ಕೂಡಲೆ ಹರ್ಷಿತಾಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಸಾವನ್ನಪ್ಪಿದ್ದಾಳೆ.

ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಆರೋಪ ಮಾಡಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವು ತಲೆ ಮರೆಸಿಕೊಂಡಿದ್ದಾನೆ.

ಹಿಂದಿನ ಲೇಖನಕಾಲವೂ ಕೂಡಿ ಬರುತ್ತದೆ, ಜೆಡಿಎಸ್ ಸರಕಾರವೂ ಬರುತ್ತದೆ: ಮಾಜಿ ಪ್ರಧಾನಿ  ಹೆಚ್.ಡಿ.ದೇವೆಗೌಡ
ಮುಂದಿನ ಲೇಖನಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ: ತನಿಖೆ ಚುರುಕು